ಯೋಧರಿಂದಲೇ ನಕ್ಸಲರಿಗೆ ಶಸ್ತ್ರಾಸ್ತ್ರ ಪೂರೈಕೆ
ಲಖನೌ,
ಏ. 30 : ನಕ್ಸಲರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಇಬ್ಬರು ಪೊಲೀಸರು ಮತ್ತು ಇಬ್ಬರು ಸಿಆರ್ ಪಿಎಫ್ ಸಿಬ್ಬಂದಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವ ಘಟನೆ ಶುಕ್ರವಾರ ಉತ್ತರ ಪ್ರದೇಶದಲ್ಲಿ ನಡೆದಿದೆ. id="toptextpromo">ಕಳೆದ
ಕೆಲ ದಿನಗಳ ಹಿಂದೆ ದಂತೇವಾಡದಲ್ಲಿ ನಡೆದ ಭೀಕರ ನರಮೇಧದ ನಂತರ ಇಲ್ಲಿನ ಸಿಆರ್ ಪಿಎಫ್ ಕ್ಯಾಂಪ್ ಮೇಲೆ ನಡೆಸಿ ವಿನೋದ ಪಾಸ್ವಾನ್ ಮತ್ತು ದಿನೇಶ್ ಸಿಂಗ್ ಎಂಬ ಇಬ್ಬರು ಸಿಆರ್ ಪಿಎಫ್ ಯೋಧರನ್ನು ಬಂಧಿಸಲಾಗಿದೆ. ಅಲ್ಲದೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಸಬ್ ಇನ್ಸ್ ಪೆಕ್ಟರ್ ಆಗಿ ನಿವೃತ್ತಿ ಹೊಂದಿರುವ ಯಶೋನಂದ ಸಿಂಗ್ ಅವರನ್ನು ಇದೇ ಆರೋಪದ ಮೇಲೆ ಬಂಧಿಸಲಾಗಿದೆ. ಬಂಧಿತ ನಿವೃತ್ತ ಅಧಿಕಾರಿ ಮನೆಯಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಸಿಂಗ್ ಅವರು ನಕ್ಸಲರಿಗೆ ಬುಲೆಟ್ ಗಳನ್ನು ಪೂರೈಸುತ್ತಿದ್ದರು ಎಂದು ತಿಳಿದು ಬಂದಿದೆ. id='are-slot-1' class='oiad oi-axt oiadv'> id='top-searched-articles'>ದೇಶದಲ್ಲಿರುವ
ನಕ್ಸಲರಿಗೆ ಭಯೋತ್ಪಾದಕ ಹಾಗೂ ಎಲ್ ಟಿಟಿಇ ನಂಟಿರುವುದರಿಂದ ಅವರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಾಗಿದೆ ಆರೋಪದ ಬೆನ್ನಲ್ಲೇ ಇಂದು ಅತಂಕಕಾರಿ ಅಂಶವನ್ನು ಬೆಳಕಿಗೆ ಬಂದಿದೆ.











Click it and Unblock the Notifications