ಗೃಹ ಇಲಾಖೆಯ ಅಧಿಕಾರಿ ಸಿಬಿಐ ಬಲೆಗೆ

ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ಡಿಯುಗೆ ಸೇರಿದ ಅಲೋಕ್ ಖಿಮಾನಿ ಎಂಬ ಉದ್ಯಮಿಯಿಂದ 50 ಲಕ್ಷ ರೂಪಾಯಿ ಲಂಚ ಪಡೆದ ಆರೋಪವನ್ನು ರವಿ ಮೇಲೆ ಸಿಬಿಐ ಹೊರೆಸಿದೆ. ರವಿಯ ನವದೆಹಲಿಯಲ್ಲಿ ನಿವಾಸದ ಮೇಲೂ ಸಿಬಿಐ ದಾಳಿ ನಡೆಸಿ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದೆ.
52ರ ಹರೆಯದ ಈ ವ್ಯಕ್ತಿ 1983ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದು, ಗೃಹ ಸಚಿವಾಲಯದ ಪ್ರಮುಖ ಹುದ್ದೆಯಲ್ಲಿದ್ದ. ಈತನನ್ನು ಇದೀಗ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯನ್ನಾಗಿ ರವಿಯನ್ನು ಕೇಂದ್ರ ಸರಕಾರವು ನೇಮಿಸಿತ್ತು. ಗೃಹ ಇಲಾಖೆಯ ಜೊತೆಗೆ ವಿಪತ್ತು ನಿರ್ವಹಣೆ ಇಲಾಖೆಯ ಜಂಟಿ ಕಾರ್ಯದರ್ಶಿಗಳ ಕಚೇರಿಯಲ್ಲೂ ರವಿ ದುಡಿಯುತ್ತಿದ್ದಾರೆ. 2009ರಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ ಪರಿಹಾರ ಕಾರ್ಯಗಳಿಗಾಗಿ ಸಮೀಕ್ಷೆ ನಡೆಸಿದ ಕೇಂದ್ರ ತಂಡದ ನೇತೃತ್ವವನ್ನು ರವಿ ವಹಿಸಿದ್ದರು.












Click it and Unblock the Notifications