ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದುರ್ಗದಲ್ಲೇ ಐಐಎಸ್ಸಿ ಎರಡನೇ ಶಾಖೆ: ಸಿಎಂ
ಆಂಧ್ರಪ್ರದೇಶದ ಅನಂತಪುರದಲ್ಲಿ ಬೆಂಗಳೂರಿನ ಐಐಎಸ್ಸಿಯ ಎರಡನೇ ಶಾಖೆ ಆರಂಭಿಸಲು ಆಂಧ್ರದ ಮುಖ್ಯಮಂತ್ರಿ ರೋಸಯ್ಯ ಹಾಗೂ ಕೇಂದ್ರ ಶಿಕ್ಷಣ ಸಚಿವ ಕಪಿಲ್ ಸಿಬಲ್ ಮಾತುಕತೆ ನಡೆಸಿದ್ದಾರೆ ಎಂಬ ಮಾಧ್ಯಮದ ವರದಿಯನ್ನು ಯಡಿಯೂರಪ್ಪ ತಳ್ಳಿಹಾಕಿದ್ದಾರೆ. ವಿಜ್ಞಾನ ಸಂಸ್ಥೆ ಶಾಖಾ ಸಂಸ್ಥೆ ಸ್ಥಾಪನೆಗೆ ಭೂಮಿ ಖರೀದಿಸಲಾಗಿದೆ, ಕಟ್ಟಡ ನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಲು ಬೇಕಾದ ಸಮೀಕ್ಷೆ ಕಾರ್ಯ ಕೂಡ ಪೂರ್ಣಗೊಂಡಿದೆ. ಚಿತ್ರದುರ್ಗದಲ್ಲಿ ಐಐಎಸ್ಸಿ ಶಾಖೆ ಆರಂಭಗೊಳ್ಳಲಿದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ದಿನಪತ್ರಿಕೆಯಲ್ಲಿ ಐಐಎಸ್ಸಿ ಸ್ಥಳಾಂತರಬಗ್ಗೆ ವರದಿ ಪ್ರಕಟವಾದ ಮೇಲೆ ಪ್ರತಿಕ್ರಿಯಿಸಿದ ಚಿತ್ರದುರ್ಗದ ಸಂಸದ ಜನಾರ್ಧನ ಸ್ವಾಮಿ ಅವರು, ದುರ್ಗದಲ್ಲೇ ಐಐಎಸ್ಸಿ ಸ್ಥಾಪನೆಯಾಗಲಿದೆ, ಇನ್ನು ಹದಿನೈದು ದಿನಗಳಲ್ಲಿ ಕಪಿಲ್ ಸಿಬಲ್ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದಿದ್ದರು. ಭಾರತೀಯ ವಿಜ್ಞಾನ ಸಂಸ್ಥೆಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಕುದಾಪುರ ಫಾರಂ ವಲಯದಲ್ಲಿ ಈಗಾಗಲೇ 1500 ಎಕರೆ ಭೂಮಿಯನ್ನು ಖರೀದಿಸಿದೆ.
Comments
ಚಿತ್ರದುರ್ಗ ಐಐಎಸ್ಸಿ ಯಡಿಯೂರಪ್ಪ ಜಿಲ್ಲಾಸುದ್ದಿ ಜನಾರ್ಧನ ಸ್ವಾಮಿ ಆಂಧ್ರ ಪ್ರದೇಶ ಕಪಿಲ್ ಸಿಬಲ್ iisc chitradurga janardhan swamy district news andhra pradesh kapil sibal
Story first published: Monday, April 26, 2010, 15:30 [IST]