For Daily Alerts
ಬಾಗಿಲು ಮುಚ್ಚಿದ ರೇಷ್ಮೆ ಮಂಡಳಿ
ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳು ನಡೆಯಲಿರುವ ಸಚಿವ ಸಂಪುಟದಲ್ಲಿ ವಿಸ್ತೃತವಾಗಿ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು. ಈ ನಷ್ಟಕ್ಕೆ ರೇಷ್ಮೆ ಮುಕ್ತ ವ್ಯಾಪಾರ ನೀತಿಯೇ ಕಾರಣವಾಗಿದೆ. ಜೊತೆಗೆ ಆಮದು ಹಾಗೂ ಕೃತಕ ರೇಷ್ಮೆ ನೂಲಿನ ಕಡೆ ಒಲವು ವ್ಯಕ್ತವಾಗಿರುವುದೂ ಇತರ ಕಾರಣಗಳು ಎಂದು ಅವರು ವಿವರಿಸಿದರು.
ಸಂಸ್ಥೆಗೆ ಪ್ರತಿ ವರ್ಷ ಬರುವ ಆದಾಯ ಇಬ್ಬರು ಐಎಎಸ್ ಅಧಿಕಾರಿಗಳ ವೇತನಕ್ಕೆ ಹೋಗುತ್ತದೆ. ಸಂಸ್ಥೆಯ 101 ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆಯಬೇಕಾಗುತ್ತದೆ. ಸರಕಾರ ಸಮ್ಮತಿ ಸೂಚಿಸಿದರೆ ಈ ಸಿಬ್ಬಂದಿಯನ್ನು ಬೇರೆ ಇಲಾಖೆಗೆ ನಿಯುಕ್ತಿಗೊಳಿಸಬಹುದು ಎಂದು ವೆಂಕಟರಮಣಪ್ಪ ವಿವರಿಸಿದರು.
Story first published: Tuesday, April 20, 2010, 12:42 [IST]