ಗಡಿ : ಎಂಇಎಸ್ ನಿಂದ ಮುಂಬೈ ಚೆಲೋ
ಬೆಳಗಾವಿ,
ಏ. 15 : ಗಡಿ ವಿಷಯ ದುರ್ಬಳಿಕೆಗೆ ಮುಂದಾಗಿರುವ (ಮಹಾರಾಷ್ಟ್ರ ಏಕೀಕರಣ ಸಮಿತಿ) ಎಂಇಎಸ್ ಏ.16 ರಂದು ಮುಂಬೈ ಚೆಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆ ದಿನ ಧರಣಿ, ವಿಧಾನಸಭೆಗೆ ಮುತ್ತಿಗೆ ಮತ್ತು ಸಚಿವರಿಗೆ ಘೇರಾವ್ ಹಾಕಲು ನಿರ್ಧರಿಸಿದ್ದು, ಮಹಾರಾಷ್ಟ್ರದ ವಿವಿಧ ಸಂಘಟನೆಗಳು ಕೈಜೋಡಿಸಿವೆ. id="toptextpromo"> ಏ.15 ರಂದು ಸಂಜೆ ಬೆಳಗಾವಿಯಿಂದ ಎಂಇಎಸ್ ಕಾರ್ಯಕರ್ತರು ಮುಂಬೈಗೆ ತೆರಳಿದ್ದಾರೆ. ನಾಯಕರು ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ಮತ್ತು ಪ್ರಚಾರ ನಡೆದಿದೆ. ಗಡಿ ಭಾಗ ಕೇಂದ್ರಾಡಳಿತ ಪ್ರದೇಶವಾಗಬೇಕು ಮತ್ತು ಕರ್ನಾಟಕ ಸರಕಾರ ಮರಾಠಿ ಭಾಷಿಕರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ನಿಲ್ಲಬೇಕು ಎನ್ನುವುದು ಈ ಧರಣಿ ಮುಖ್ಯ ಉದ್ದೇಶವಾಗಿದೆ. id='are-slot-1' class='oiad oi-axt oiadv'> id='top-searched-articles'> ಎಂಇಎಸ್ ಏ.11 ರಂದು ಕೊಲ್ಲಾಪುರ ಚೆಲೋ ಕಾರ್ಯಕ್ರಮ ಹಮ್ಮಿಕೊಂಡು ಕರ್ನಾಟಕದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ಇದೀಗ ಏ.16 ರಂದು ಮುಂಬೈ ಚೆಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.











Click it and Unblock the Notifications