ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿ ಮಾಧ್ಯಮ ಭಾರತಿಯ ಘಟಿಕೋತ್ಸವ

By Shami
|
Google Oneindia Kannada News

Mathoor Krishnamurthy
ಬೆಂಗಳೂರು, ಏ.14 : ಮಾಧ್ಯಮ ಭಾರತಿಯ ಆಶ್ರಯದಲ್ಲಿ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯುತ್ತಿರುವ 'ನಿರೂಪಣೆ ಕಲೆ ಮತ್ತು ಧ್ವನಿ ತರಬೇತಿ' ತಂಡದ ಪ್ರಥಮ ಕೋರ್ಸ್ ಇದೀಗ ಮುಕ್ತಾಯವಾಗಿದೆ. ಪತ್ರಕರ್ತರಾಗಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮ ಇದೇ ಏಪ್ರಿಲ್ 17ರ ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಪ್ರಮಾಣ ಪತ್ರ ವಿತರಣೆ: ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ. ಮುಖ್ಯ ಅತಿಥಿಗಳು : ಕಿರುತೆರೆ ಕಲಾವಿದೆ ಹಾಗೂ ನಿರೂಪಕಿ ಅಪರ್ಣಾ, ಆದರ್ಶ ದಂಪತಿ ಖ್ಯಾತಿಯ ಶೈಲಜಾ ಸಂತೋಷ್. ವಿಶೇಷ ಆಹ್ವಾನಿತರು: ಆಕಾಶವಾಣಿ ಸುದ್ದಿ ಸಂಪಾದಕರು ಟಿ.ಸಿ. ಪೂರ್ಣಿಮಾ, ಉದಯ ಟಿವಿ ಸುದ್ದಿ ವಾಚಕರು ಶ್ರೀಧರ್ ಶರ್ಮ ಮತ್ತು ಜಯಶ್ರೀ, ಮಾಧ್ಯಮ ತಜ್ಞೆ ದೀಪ್ತಿ ದಿವಾಕರ್.

ಸ್ಥಳ: ಇಎಸ್‌ವಿ ಸಭಾಂಗಣ, ಭಾರತೀಯ ವಿದ್ಯಾ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ಆಸಕ್ತರು ತಪ್ಪದೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಮಾಧ್ಯಮ ಭಾರತಿಯ ನಿರ್ದೇಶಕ ಎಂ. ಜಯರಾಮ ಅಡಿಗ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

(ಈ ಕೋರ್ಸ್ ಬಗೆಗೆ ಹೆಚ್ಚು ತಿಳಿಯಬಯಸುವ ವಿದ್ಯಾರ್ಥಿಗಳು ನಿರ್ದೇಶಕರನ್ನು ಈ ದೂರವಾಣಿ ಸಂಖ್ಯೆ ಅಥವಾ ಇಮೇಲ್ ಮೂಲಕ ಸಂಪರ್ಕಿಸಬಹುದು. [email protected], ಜಯರಾಮ ಅಡಿಗ 99865 06475.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X