ಸಾವಿಗೆ ಹತ್ತಿರವಾಗಿದ್ದ ಆಮೆಯ ರಕ್ಷಣೆ...
ಶಿವಮೊಗ್ಗ,ಏ.14:
ಇತ್ತೀಚೆಗೆ ಗಾಜನೂರು ಸಮೀಪ ಮೀನುಗಾರರ ಬಲೆಗೆ ಸೆರೆಸಿಕ್ಕು, ಇನ್ನೇನು ಸಾವಿಗೆ ಹತ್ತಿರವಾಗಿದ್ದ ದೊಡ್ಡದಾದ ಆಮೆಯೊಂದನ್ನು ರಕ್ಷಿಸುವ ಮೂಲಕ ಅದಕ್ಕೆ ಮರುಜನ್ಮ ನೀಡುವಲ್ಲಿ ಶಿವಮೊಗ್ಗದ ಮೂವರು ಯುವಕರು ಸಫಲರಾಗಿದ್ದಾರೆ. id="toptextpromo">ಬಲೆಗೆ
ಬಿದ್ದ ಈ ಆಮೆಯನ್ನು ಮೀನುಗಾರರು ಮಾರಾಟ ಮಾಡುವ ಯತ್ನದಲ್ಲಿದ್ದಾಗ ಅದೇ ದಾರಿಯಲ್ಲಿ ಸಾಗಿಬರುತ್ತಿದ್ದ ಆಕಾಶ್ ಹೆಗ್ಡೆ, ಕೆನಿತ್ ಹರ್ಷ ಹಾಗೂ ಎಂ.ಪಿ.ಅನಿಲ್ರವರು ಮೀನುಗಾರರ ಬಳಿಯಿದ್ದ ಆಮೆಯನ್ನು ಗಮನಿಸಿ, ಅದಕ್ಕೆ 2 ಸಾವಿರ ರೂ. ಹಣ ನೀಡಿ, ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇಂದು
ಈ ಆಮೆಯನ್ನು ಉಪಸಂರಕ್ಷಣಾಧಿಕಾರಿಗಳ ಕಛೇರಿಗೆ ತರಲಾಗಿದ್ದು, ಅದನ್ನು ಆಗುಂಬೆ ಸಮೀಪದಲ್ಲಿರುವ ಕೊಳವೊಂದರಲ್ಲಿ ಬಿಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.











Click it and Unblock the Notifications