ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿಗೆ ಹತ್ತಿರವಾಗಿದ್ದ ಆಮೆಯ ರಕ್ಷಣೆ...

By * ಕೆಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

Sea Turtle rescued, Shimoga
ಶಿವಮೊಗ್ಗ,ಏ.14: ಇತ್ತೀಚೆಗೆ ಗಾಜನೂರು ಸಮೀಪ ಮೀನುಗಾರರ ಬಲೆಗೆ ಸೆರೆಸಿಕ್ಕು, ಇನ್ನೇನು ಸಾವಿಗೆ ಹತ್ತಿರವಾಗಿದ್ದ ದೊಡ್ಡದಾದ ಆಮೆಯೊಂದನ್ನು ರಕ್ಷಿಸುವ ಮೂಲಕ ಅದಕ್ಕೆ ಮರುಜನ್ಮ ನೀಡುವಲ್ಲಿ ಶಿವಮೊಗ್ಗದ ಮೂವರು ಯುವಕರು ಸಫಲರಾಗಿದ್ದಾರೆ.

ಬಲೆಗೆ ಬಿದ್ದ ಈ ಆಮೆಯನ್ನು ಮೀನುಗಾರರು ಮಾರಾಟ ಮಾಡುವ ಯತ್ನದಲ್ಲಿದ್ದಾಗ ಅದೇ ದಾರಿಯಲ್ಲಿ ಸಾಗಿಬರುತ್ತಿದ್ದ ಆಕಾಶ್ ಹೆಗ್ಡೆ, ಕೆನಿತ್ ಹರ್ಷ ಹಾಗೂ ಎಂ.ಪಿ.ಅನಿಲ್‌ರವರು ಮೀನುಗಾರರ ಬಳಿಯಿದ್ದ ಆಮೆಯನ್ನು ಗಮನಿಸಿ, ಅದಕ್ಕೆ 2 ಸಾವಿರ ರೂ. ಹಣ ನೀಡಿ, ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.

ಇಂದು ಈ ಆಮೆಯನ್ನು ಉಪಸಂರಕ್ಷಣಾಧಿಕಾರಿಗಳ ಕಛೇರಿಗೆ ತರಲಾಗಿದ್ದು, ಅದನ್ನು ಆಗುಂಬೆ ಸಮೀಪದಲ್ಲಿರುವ ಕೊಳವೊಂದರಲ್ಲಿ ಬಿಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X