ಗೋಮಾಳ ಜಮೀನಿಗೆ ಒತ್ತಾಯಿಸಿ ಪ್ರತಿಭಟನೆ

ವಿರುಪ್ಪನಕೊಪ್ಪಕ್ಕೆ ಸೇರಿದ ಸರ್ವೇ ನಂ.6ರಲ್ಲಿರುವ ಜಮೀನನ್ನು ಈಗಾಗಲೇ ನಗರಸಭೆಯ ಆಶ್ರಯ ಬಡಾವಣೆಗಾಗಿ ಕಾಯ್ದಿರಿಸಿದ್ದು, ಈ ಜಮೀನು ವಿರುಪ್ಪನಕೊಪ್ಪ ಗ್ರಾಮಸ್ಥರಿಗೆ ಸೇರಬೇಕಾಗಿತ್ತು. ಆದರೆ, ಈ ಜಮೀನು ಆಶ್ರಯ ಬಡಾವಣೆಗೆ ಸೇರಿದ್ದಾಗಿದೆ ಎಂದು ತಿಳಿದಿರಲಿಲ್ಲ. ನಮ್ಮ ಗ್ರಾಮದಲ್ಲಿ 100ರಿಂದ 150 ಜನರಿಗೆ ವಸತಿ ಇಲ್ಲ, ಶಾಲೆಗೆ ಜಾಗವಿಲ್ಲ, ಆಸ್ಪತ್ರೆಯಾಗಲೀ ಇಲ್ಲ. ಹೀಗಾಗಿ, ಗ್ರಾಮದ ಅಭಿವೃದ್ಧಿಯ ನಿಟ್ಟಿನಲ್ಲಿ ಹಾಗೂ ನಿವೇಶನವಿಲ್ಲದ ಗ್ರಾಮದ ಜನರಿಗೆ ನಿವೇಶನ ದೊರಕಿಸಿಕೊಡುವ ಸಲುವಾಗಿ ಗ್ರಾಮಕ್ಕೆ ಸೇರಿದ ಗೋಮಾಳದ ಜಮೀನನ್ನು ವಿರುಪ್ಪನಕೊಪ್ಪದ ಜನರಿಗೆ ಮಾಡಿಕೊಡುವಂತೆ ಆಗ್ರಹಿಸಿದರು.












Click it and Unblock the Notifications