ಜಟಿಲಗೊಂಡ ಸೇನಾ ಸ್ಮಾರಕ ನಿರ್ಮಾಣ
ಭಾನುವಾರ ಬೆಳಗ್ಗೆ ಇಂದಿರಾಗಾಂಧಿ ಸಂಗೀತ ಕಾರಂಜಿ ಆವರಣದಲ್ಲಿ ಸ್ಥಳ ವೀಕ್ಷಣೆ ಆಗಮಿಸಿದ್ದ ಅವರು, ಉದ್ಯಾನವನ ಮಾಡುತ್ತಿರುವುದರಲ್ಲಿ ಯಾವುದೇ ಸ್ವಾರ್ಥವಿಲ್ಲ. ಸೇನೆ ಸೇರುವಂತೆ ಯುವಕರಲ್ಲಿ ಪ್ರೊತ್ಸಾಹಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಇಲ್ಲಿನ 1300 ಚ.ಮೀ ಜಾಗದಲ್ಲಿ 6 ಅಡಿ ಎತ್ತರದಲ್ಲಿ ನಿರ್ಮಾಣವಾಗುವ ಸ್ಮಾರಕ ವೀರಗಲ್ಲು ಮಾದರಿಯಲ್ಲಿರುತ್ತದೆ.
ವೀರಗಲ್ಲು ನಿರ್ಮಾಣಕ್ಕೆ ಕೇವಲ ನಾಲ್ಕು ಮರಗಳು ಮಾತ್ರ ಧರೆಗುರುಳಲಿವೆ. ಅವು ನೀಲಗಿರಿ ಮರಗಳು. ಈ ನೀಲಗಿರಿ ಮರಕ್ಕೆ ಬದಲಾಗಿ ಸಾರ್ವಜನಿಕ ಉಪಯೋಗಕ್ಕೆ ಬರುವ 40 ವಿವಿಧ ತಳಿಯ ಗಿಡಗಳನ್ನು ಈ ಉದ್ಯಾನವನದಲ್ಲಿ ನೆಡಲಾಗುವುದು ಎಂದು ನಂಜಪ್ಪ ವಿವರಿಸಿದರು.
ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನದಲ್ಲಿ ಯಾವುದೇ ರಾಷ್ಟ್ರೀಯ ಸೇನೆ ಸ್ಮಾರಕ ನಿರ್ಮಿಸಲು ಯಾವ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಶಾಸಕರು, ಉದ್ಯಮಿಗಳು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಶಾಸಕರಾದ ವಿ ಎಸ್ ಉಗ್ರಪ್ಪ, ಎನ್ ಎ ಹ್ಯಾರಿಸ್, ಇನ್ಫೋಸಿಸ್ ಎಚ್ ಆರ್ ಡಿ ಟಿ ವಿ ಮೋಹನ್ ದಾಸ್ ಪೈ, ಏರ್ ಡೆಕ್ಕನ್ ಮುಖ್ಯಸ್ಥ ಕ್ಯಾ.ಗೋಪಿನಾಥ್ ಮತ್ತಿತರರು ರಾಜ್ಯಪಾಲರನ್ನು ಭೇಟಿ ಮಾಡಿ ಸೇನೆ ಸ್ಮಾರಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.