ದಲಿತರಿಗೆ ಶೈಕ್ಷಣಿಕ ಪ್ರಗತಿ ಅತ್ಯವಶ್ಯ

ಸವಣೂರ ತಾಲೂಕಿನ ತೊಂಡೂರ ಗ್ರಾಮದಲ್ಲಿ ಡಿ.ಎಸ್.ಎಸ್ ಗ್ರಾಮ ಘಟಕದೊಂದಿಗೆ, ಅಂಬೇಡ್ಕರ್ ಯುವಕ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅವರು, ಕೂಲಿಯಿಂದಲೇ ಜೀವನ ನಿರ್ವಹಿಸುವ ಪಾಲಕರೂ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕಲ್ಪಿಸಿ, ಅವರ ಭವಿಷ್ಯವನ್ನು ಸುಭದ್ರಗೊಳಿಸಿ ಎಂದು ಕರೆ ನೀಡಿದರು.
ಉದ್ಘಾಟನೆಯನ್ನು ನೆರವೇರಿಸಿದ ಮುಖಂಡ ಡಿ.ಎಸ್ ಮಾಳಗಿ, ಸಚಿವರ ನೆರವಿನೊಂದಿಗೆ ಸಮುದಾಯ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುತ್ತೆನೆ ಎಂದು ಭರವಸೆ ನೀಡಿದರು. ದಲಿತರಿಗೆ ಸರಕಾರ ರೂಪಿಸಿರುವ ಹಲವಾರು ಯೋಜನೆಗಳ ಬಗ್ಗೆ ವಿವರಣೆ ನೀಡಿದರು.
ಸಮಾರಂಭದ ಅತಿಥಿಗಳಾಗಿದ್ದ ರಾಜ್ಯ ಸಂಘಟನಾ ಸಂಚಾಲಕ ವಾಸುದೇವ ಬಸವ್ವನವರ್, ದಲಿತರ ಕೇರಿಯಲ್ಲಿ ಸರಾಯಿ ನಿಷೇದ ಕೈಗೊಳ್ಳಿ. ಸರಾಯಿಯಿಂದಾಗುವ ಸರ್ವನಾಶವನ್ನು ತಪ್ಪಿಸಿಕೊಳ್ಳಿ ಎಂದು ತಿಳಿಸಿದರು. ದಲಿತ ಸಮುದಾಯಕ್ಕೆ ಕಾನೂನಿನ ರಕ್ಷಣೆ ಹಾಗೂ ಸರಕಾರದ ಅನುದಾನಗಳ ಸೌಲಭ್ಯವನ್ನು ವಿವರಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಈಶ್ವರಯ್ಯ ಹಿರೇಮಠ ವಹಿಸಿಕೊಂಡು, ವಿರೂಪಾಕ್ಷಯ್ಯ ಶಾಸ್ತ್ರಿಗಳು ಹಿರೇಮಠ, ತಾ.ಪಂ ಸದಸ್ಯ ಸೋಮಣ್ಣ ಅಮ್ಮನವರ್, ಶಂಕ್ರಣ್ಣ ಹಿರೇಮಠ, ಶ್ರೀಕಾಂತ ಲಕ್ಷ್ಮೇಶ್ವರ, ಜಗನ್ನಾಥ ಭಜಂತ್ರಿ, ಅಶೋಕ ಎಮ್, ಲಕ್ಷ್ಮಣ ಹುಲ್ಲಮ್ಮನವರ್, ಉಮೇಶ ಮೈಲಮ್ಮನವರ್, ಮಹಾದೇವಪ್ಪ ಶ್ಯಾಡಂಬಿ, ಗದಿಗೇಶ ಕ್ಯಾಡದ್, ಜಗದೀಶ ಪೂಜಾರ, ಲಕ್ಷ್ಮಣ ಕನವಳ್ಳಿ ಮುಂತಾದ ಪ್ರಮುಖರ ಉಪಸ್ಥಿತರಿದ್ದರು.ಡಿ.ಎಸ್.ಎಸ್ ಗ್ರಾಮ ಘಟಕದ ಸಂಚಾಲಕರಾಗಿ ಬಸವರಾಜ ಗಾಜಿ, ಪದಾಧಿಕಾರಿಗಳಾಗಿ ಶಿವಪ್ಪ ಗಾಜಿ, ಫಕ್ಕೀರಪ್ಪ ಮರೆಯಪ್ಪನವರ್, ಶಿವಪ್ಪ ದೊಡ್ಮನಿ, ಈರಣ್ಣ ದೊಡ್ಮನಿ, ಶಿವಪ್ಪ ದು. ದೊಡ್ಮನಿ, ಪ್ರಕಾಶ ಸೂರಣಗಿ ಆಯ್ಕೆಗೊಂಡರು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications