ದಲಿತರಿಗೆ ಶೈಕ್ಷಣಿಕ ಪ್ರಗತಿ ಅತ್ಯವಶ್ಯ

ಸವಣೂರ ತಾಲೂಕಿನ ತೊಂಡೂರ ಗ್ರಾಮದಲ್ಲಿ ಡಿ.ಎಸ್.ಎಸ್ ಗ್ರಾಮ ಘಟಕದೊಂದಿಗೆ, ಅಂಬೇಡ್ಕರ್ ಯುವಕ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅವರು, ಕೂಲಿಯಿಂದಲೇ ಜೀವನ ನಿರ್ವಹಿಸುವ ಪಾಲಕರೂ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕಲ್ಪಿಸಿ, ಅವರ ಭವಿಷ್ಯವನ್ನು ಸುಭದ್ರಗೊಳಿಸಿ ಎಂದು ಕರೆ ನೀಡಿದರು.
ಉದ್ಘಾಟನೆಯನ್ನು ನೆರವೇರಿಸಿದ ಮುಖಂಡ ಡಿ.ಎಸ್ ಮಾಳಗಿ, ಸಚಿವರ ನೆರವಿನೊಂದಿಗೆ ಸಮುದಾಯ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುತ್ತೆನೆ ಎಂದು ಭರವಸೆ ನೀಡಿದರು. ದಲಿತರಿಗೆ ಸರಕಾರ ರೂಪಿಸಿರುವ ಹಲವಾರು ಯೋಜನೆಗಳ ಬಗ್ಗೆ ವಿವರಣೆ ನೀಡಿದರು.
ಸಮಾರಂಭದ ಅತಿಥಿಗಳಾಗಿದ್ದ ರಾಜ್ಯ ಸಂಘಟನಾ ಸಂಚಾಲಕ ವಾಸುದೇವ ಬಸವ್ವನವರ್, ದಲಿತರ ಕೇರಿಯಲ್ಲಿ ಸರಾಯಿ ನಿಷೇದ ಕೈಗೊಳ್ಳಿ. ಸರಾಯಿಯಿಂದಾಗುವ ಸರ್ವನಾಶವನ್ನು ತಪ್ಪಿಸಿಕೊಳ್ಳಿ ಎಂದು ತಿಳಿಸಿದರು. ದಲಿತ ಸಮುದಾಯಕ್ಕೆ ಕಾನೂನಿನ ರಕ್ಷಣೆ ಹಾಗೂ ಸರಕಾರದ ಅನುದಾನಗಳ ಸೌಲಭ್ಯವನ್ನು ವಿವರಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಈಶ್ವರಯ್ಯ ಹಿರೇಮಠ ವಹಿಸಿಕೊಂಡು, ವಿರೂಪಾಕ್ಷಯ್ಯ ಶಾಸ್ತ್ರಿಗಳು ಹಿರೇಮಠ, ತಾ.ಪಂ ಸದಸ್ಯ ಸೋಮಣ್ಣ ಅಮ್ಮನವರ್, ಶಂಕ್ರಣ್ಣ ಹಿರೇಮಠ, ಶ್ರೀಕಾಂತ ಲಕ್ಷ್ಮೇಶ್ವರ, ಜಗನ್ನಾಥ ಭಜಂತ್ರಿ, ಅಶೋಕ ಎಮ್, ಲಕ್ಷ್ಮಣ ಹುಲ್ಲಮ್ಮನವರ್, ಉಮೇಶ ಮೈಲಮ್ಮನವರ್, ಮಹಾದೇವಪ್ಪ ಶ್ಯಾಡಂಬಿ, ಗದಿಗೇಶ ಕ್ಯಾಡದ್, ಜಗದೀಶ ಪೂಜಾರ, ಲಕ್ಷ್ಮಣ ಕನವಳ್ಳಿ ಮುಂತಾದ ಪ್ರಮುಖರ ಉಪಸ್ಥಿತರಿದ್ದರು.ಡಿ.ಎಸ್.ಎಸ್ ಗ್ರಾಮ ಘಟಕದ ಸಂಚಾಲಕರಾಗಿ ಬಸವರಾಜ ಗಾಜಿ, ಪದಾಧಿಕಾರಿಗಳಾಗಿ ಶಿವಪ್ಪ ಗಾಜಿ, ಫಕ್ಕೀರಪ್ಪ ಮರೆಯಪ್ಪನವರ್, ಶಿವಪ್ಪ ದೊಡ್ಮನಿ, ಈರಣ್ಣ ದೊಡ್ಮನಿ, ಶಿವಪ್ಪ ದು. ದೊಡ್ಮನಿ, ಪ್ರಕಾಶ ಸೂರಣಗಿ ಆಯ್ಕೆಗೊಂಡರು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications