ದಲಿತರಿಗೆ ಶೈಕ್ಷಣಿಕ ಪ್ರಗತಿ ಅತ್ಯವಶ್ಯ

ಸವಣೂರ ತಾಲೂಕಿನ ತೊಂಡೂರ ಗ್ರಾಮದಲ್ಲಿ ಡಿ.ಎಸ್.ಎಸ್ ಗ್ರಾಮ ಘಟಕದೊಂದಿಗೆ, ಅಂಬೇಡ್ಕರ್ ಯುವಕ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅವರು, ಕೂಲಿಯಿಂದಲೇ ಜೀವನ ನಿರ್ವಹಿಸುವ ಪಾಲಕರೂ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕಲ್ಪಿಸಿ, ಅವರ ಭವಿಷ್ಯವನ್ನು ಸುಭದ್ರಗೊಳಿಸಿ ಎಂದು ಕರೆ ನೀಡಿದರು.
ಉದ್ಘಾಟನೆಯನ್ನು ನೆರವೇರಿಸಿದ ಮುಖಂಡ ಡಿ.ಎಸ್ ಮಾಳಗಿ, ಸಚಿವರ ನೆರವಿನೊಂದಿಗೆ ಸಮುದಾಯ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುತ್ತೆನೆ ಎಂದು ಭರವಸೆ ನೀಡಿದರು. ದಲಿತರಿಗೆ ಸರಕಾರ ರೂಪಿಸಿರುವ ಹಲವಾರು ಯೋಜನೆಗಳ ಬಗ್ಗೆ ವಿವರಣೆ ನೀಡಿದರು.
ಸಮಾರಂಭದ ಅತಿಥಿಗಳಾಗಿದ್ದ ರಾಜ್ಯ ಸಂಘಟನಾ ಸಂಚಾಲಕ ವಾಸುದೇವ ಬಸವ್ವನವರ್, ದಲಿತರ ಕೇರಿಯಲ್ಲಿ ಸರಾಯಿ ನಿಷೇದ ಕೈಗೊಳ್ಳಿ. ಸರಾಯಿಯಿಂದಾಗುವ ಸರ್ವನಾಶವನ್ನು ತಪ್ಪಿಸಿಕೊಳ್ಳಿ ಎಂದು ತಿಳಿಸಿದರು. ದಲಿತ ಸಮುದಾಯಕ್ಕೆ ಕಾನೂನಿನ ರಕ್ಷಣೆ ಹಾಗೂ ಸರಕಾರದ ಅನುದಾನಗಳ ಸೌಲಭ್ಯವನ್ನು ವಿವರಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಈಶ್ವರಯ್ಯ ಹಿರೇಮಠ ವಹಿಸಿಕೊಂಡು, ವಿರೂಪಾಕ್ಷಯ್ಯ ಶಾಸ್ತ್ರಿಗಳು ಹಿರೇಮಠ, ತಾ.ಪಂ ಸದಸ್ಯ ಸೋಮಣ್ಣ ಅಮ್ಮನವರ್, ಶಂಕ್ರಣ್ಣ ಹಿರೇಮಠ, ಶ್ರೀಕಾಂತ ಲಕ್ಷ್ಮೇಶ್ವರ, ಜಗನ್ನಾಥ ಭಜಂತ್ರಿ, ಅಶೋಕ ಎಮ್, ಲಕ್ಷ್ಮಣ ಹುಲ್ಲಮ್ಮನವರ್, ಉಮೇಶ ಮೈಲಮ್ಮನವರ್, ಮಹಾದೇವಪ್ಪ ಶ್ಯಾಡಂಬಿ, ಗದಿಗೇಶ ಕ್ಯಾಡದ್, ಜಗದೀಶ ಪೂಜಾರ, ಲಕ್ಷ್ಮಣ ಕನವಳ್ಳಿ ಮುಂತಾದ ಪ್ರಮುಖರ ಉಪಸ್ಥಿತರಿದ್ದರು.ಡಿ.ಎಸ್.ಎಸ್ ಗ್ರಾಮ ಘಟಕದ ಸಂಚಾಲಕರಾಗಿ ಬಸವರಾಜ ಗಾಜಿ, ಪದಾಧಿಕಾರಿಗಳಾಗಿ ಶಿವಪ್ಪ ಗಾಜಿ, ಫಕ್ಕೀರಪ್ಪ ಮರೆಯಪ್ಪನವರ್, ಶಿವಪ್ಪ ದೊಡ್ಮನಿ, ಈರಣ್ಣ ದೊಡ್ಮನಿ, ಶಿವಪ್ಪ ದು. ದೊಡ್ಮನಿ, ಪ್ರಕಾಶ ಸೂರಣಗಿ ಆಯ್ಕೆಗೊಂಡರು.











Click it and Unblock the Notifications