ಕೊಲೆಗಿಂತಲೂ ಹೇಯ ಕೃತ್ಯ : ರಾಘವೇಶ್ವರ ಶ್ರೀ
ಹುಬ್ಬಳ್ಳಿ,
ಏ. 8 : ಕೊಲೆ ಮಾಡಿದರೆ ಕೆಲಸ ಮುಗಿದು ಹೋಗುತ್ತದೆ. ನಕಲಿ ಅಶ್ಲೀಲ ಸಿಡಿಯಂತಹ ಪ್ರಕರಣಗಳು ಪ್ರತಿಕ್ಷಣ ಸಾಯಿಸುತ್ತಲೇ ಇರುತ್ತವೆ. ಎಲ್ಲಾದರೂ ಮನುಷ್ಯರೇ ಇಲ್ಲದಿದ್ದಲ್ಲಿ ಹೋಗಿ ಬದುಕಲೇ ಎಂಬ ಭಾವನೆ ಬಂದಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ತೀವ್ರ ನೊಂದು ನುಡಿದಿದ್ದಾರೆ. id="toptextpromo"> ತಮ್ಮ ವಿರುದ್ಧ ಸೃಷ್ಟಿಸಲಾಗಿರುವ ನಕಲಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೋ ಲಾಬಿಗೆ, ಲಾಭಕ್ಕೆ ಕೆಲವರು ಏನನ್ನೂ ಮಾಡಲು ಹೇಸುವುದಿಲ್ಲ. ಇಂತಹ ಸ್ಥಿತಿಯಲ್ಲಿ ಸಂಸ್ಕಾರವಂತರು ಬದುಕುವುದು ಹೇಗೆ ಎಂದು ಅವರು ಪ್ರಶ್ನಿಸಿದರು. id='are-slot-1' class='oiad oi-axt oiadv'> id='top-searched-articles'> ಸರ್ವಸಂಗವನ್ನು ಪರಿತ್ಯಾಗಿ ಮಾಡಿದ ನಮಗೆ ಮಾನ ಅಪಮಾನ, ಸಾವು ನೋವು ಎಲ್ಲವೂ ಒಂದೇ. ಹತ್ಯೆಯಲ್ಲಿ ಒಂದಿಷ್ಟು ಹಿಂಸೆ ಅನುಭವಿಸಬಹುದು. ಅದು ಅಲ್ಲಿಗೆ ಮುಗಿದು ಹೋಗುತ್ತದೆ. ಆದರೆ ಈ ನಕಲಿ ಸಿಡಿಯಂತಹ ಕೃತ್ಯ ಅದಕ್ಕಿಂತಲೂ ಘೋರ ಕೃತ್ಯ. ಪ್ರತಿಕ್ಷಣವೂ ಸಾಯಿಯುತ್ತಲೇ ಇರುತ್ತದೆ. ಮುಂದೆ ಇಂತಹ ಘಟನೆಗಳು ಯಾರ ವಿಚಾರದಲ್ಲಿಯೂ ನಡೆಯದಿರಲಿ ಎನ್ನುವುದು ನನ್ನ ಆಶಯ ಎಂದರು. ಶ್ರೀಗಳ ವಿರುದ್ಧ ಸಂಚು ರೂಪಿಸಿರುವುದನ್ನು ಪ್ರತಿಭಟಿಸಿ ವಿವಿಧ ಹಿಂದುಪರ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.











Click it and Unblock the Notifications