ಹೈದರಾಬಾದಿನಲ್ಲಿ ದಂಬಿರಿಯಾನಿ ಕಾಜು ಹಲ್ವ

ಸಾನಿಯಾ ಮದುವೆ ಪಾಕಿಸ್ತಾನದಲ್ಲಿ ನಡೆಯುವುದೆಂಬ ಮೀಡಿಯಾ ವದಂತಿಗಳನ್ನು ನಂಬಬಾರದೆಂದು ಹೇಳಿರುವ ಸಾನಿಯಾ ಕುಟುಂಬದ ಹಿರಿಯರು, ಅವಳ ಮದುವೆ ಭಾರತದಲ್ಲೇ ಜರುಗುವುದೆಂದು ಶನಿವಾರ ಬೆಳಗ್ಗೆ ಹೈದರಾಬಾದಿನಲ್ಲಿ ನೀಡಿರುವ ಸ್ಪಷ್ಟನೆಯಲ್ಲಿ ಸುಸ್ಪಷ್ಟಪಡಿಸಿದ್ದಾರೆ. ಪ್ರಳಯವೇನೂ ಆಗದಿದ್ದರೆ ಈ ಮದುವೆ ಇದೇ ಏಪ್ರಿಲ್ ಗುರುವಾರ 15 ರಂದು ಮುಸ್ಲಿಂ ಮತಾನುಯಾಯಿಗಳ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಸಂಭವಿಸುತ್ತದೆ.
ತಮಗೆ ಈಗಾಗಲೇ ಗೊತ್ತಿರುವಂತೆ ಸಾನಿಯಾ ಮತ್ತು ಶೊಯೇಬ್ ಮದುವೆ ನಾನಾ ಬಗೆಯ ವಿವಾದಗಳನ್ನು ಸೃಷ್ಟಿಸಿದೆ. ಅವಳು ಪಾಕಿಸ್ತಾನದ ಪ್ರಜೆಯನ್ನು ಮದುವೆಯಾಗಬಾರದು ಎಂದು ದಟ್ಸ್ ಕನ್ನಡದ ಒಂದು ವರ್ಗದ ಓದುಗರು ಒತ್ತಾಯಿಸುತ್ತಲೇ ಇದ್ದಾರೆ. ಶಿವಸೇನೆ ಕಾರ್ಯಕರ್ತರು, ಶ್ರೀರಾಮ ಸೇನೆ ಕಾರ್ಯಕರ್ತರಂತೂ ಈ ಮದುವೆ ವಿಷಯವಾಗಿ ಅಸಮಾಧಾನಗೊಂಡು ಕಿಡಿಗಳನ್ನು ಕಾರುತ್ತಲೇ ಇದ್ದಾರೆ. ಈ ಮಧ್ಯೆ, ಯಾರು ಯಾರನ್ನು ಯಾಕೆ ಯಾವಾಗ ಮದುವೆ ಆದರೆ ತಮಗೇನು ಬಂತು ಭಾಗ್ಯ ಎಂಬ ನಿಲವು ತಳೆದಿರವ ಉಭಯ ರಾಷ್ಟ್ರಗಳ ಜನಸ್ತೋಮ ನಿರ್ವಿಕಾರಭಾವದಿಂದಿದೆ.
ಇದೇ ವೇಳೆ, ಈ ವಿವಾದ ಅಂಕೆ ಮೀರಿದ ಪಕ್ಷದಲ್ಲಿ ಭದ್ರತೆ, ಕಾನೂನು ಮತ್ತು ಶಿಸ್ತು ಪಾಲನೆ ಸವಾಲುಗಳು ಹುಟ್ಟಿಕೊಳ್ಳುವುದರಿಂದ ಅವರೀರ್ವರ ಮದುವೆ ಮಂಟಪವನ್ನು ಪಾಕ್ ನೆಲಕ್ಕೆ ವರ್ಗಾಯಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಸಾನಿಯಾ ಮನೆಯವರು ಸಂಪೂರ್ಣವಾಗಿ ಅಲ್ಲಗೆಳೆದಿದ್ದಾರೆ. ಇನ್ನೊಂದೆಡೆ ಅಯೇಶಾ ಸಿದ್ದಿಕಿ ಎಂಬುವವಳನ್ನು ಶೊಯೇಬ್ ಈಗಾಗಲೇ ಮದುವೆಯಾಗಿದ್ದೂ ಕೂಡ ಇನ್ನೊಂದು ಮದುವೆಗೆ ತಯ್ಯಾರಾಗಿರುವುದು ಆ ಹೆಣ್ಣುಮಗಳ ಕುಟುಂಬದವರನ್ನು ಸಿಟ್ಟಿಗೇಳಿಸಿದೆ. ಅಯೇಶಾಳನ್ನು ಮಲ್ಲಿಕ್ ಮದುವೆ ಮಾಡಿಕೊಂಡಿದ್ದು ಈಗ ಅವಳನ್ನು ಡಿಚ್ ಅಂತ ನಡುನೀರಿನಲ್ಲಿ ಬಿಟ್ಟಿದ್ದಾನೆ ಎಂದು ಸಿದ್ದಿಕಿ ಕುಟುಂಬ ಆರೋಪಿಸಿದೆ.
ಮಲ್ಲಿಕ್ ಮತ್ತು ಸಾನಿಯಾ ಮದುವೆ ಆದರೆ ಬಿಕ್ಕಟ್ಟಿನಲ್ಲಿರುವ ಭಾರತ ಮತ್ತು ಪಾಕಿಸ್ಥಾನ ನಡುವಿನ ಸಂಬಂಧಗಳು ಸುಧಾರಿಸುತ್ತವೆ ಎಂದು ನಂಬುವವರೂ ಕೆಲವರಿದ್ದಾರೆ. ಸಾನಿಯಾ ಶೋಯಬ್ ವರಿಸಿದರೆ ನೆರೆಹೊರೆ ಮಧುರವಾಗಿರುತ್ತದೆ ಎಂಬ ನಿರೀಕ್ಷೆ ಕೆಲವರದು. ಇದು ಸತ್ಯವೇ ಆದ ಪಕ್ಷದಲ್ಲಿ ವಿದೇಶಾಂಗ ಖಾತೆಯ ಎಸ್ ಎಂ ಕೃಷ್ಣ, ತರೂರ್ ಮತ್ತು ಪಾಕಿಸ್ಥಾನ ವಿದೇಶಾಂಗ ಕ್ಯಾತೆಯ ಶಾ ಮಹಮೂದ್ ಖುರೇಷಿ ನಿರುದ್ಯೋಗಿಗಳಾಗಿ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಾಗುತ್ತದೆ.
ಅದೇನೇ ಇರಲಿ. ಕರ್ನಾಟಕದ ಪಕ್ಕದಲ್ಲೇ ಇರುವ ಹೈದರಾಬಾದಿನಲ್ಲಿ ಸಾನಿಯಾ ಮದುವೆ ಆಗುತ್ತಿರುವುದು ಒಂದು ದೃಷ್ಟಿಯಿಂದ ಒಳ್ಳೆಯ ಸುದ್ದಿಯೇ. ರಾತ್ರಿ ಬೆಂಗಳೂರಿನಲ್ಲಿ ರೈಲು ಹತ್ತಿ ಮಲಗಿದರೆ ಬೆಳಗ್ಗೆ ಹೈದರಾಬಾದಿನಲ್ಲಿ ಇಳಿಯಬಹುದು. ಆಹ್ವಾನ ಪತ್ರಿಕೆ ಇದ್ದವರು ಕಲ್ಯಾಣ ಮಂಟಪಕ್ಕೆ ತೆರಳಿ ಲೋಕವಿಕ್ಯಾತ ಹೈದರಾಬಾದ್ ದಂ ಬಿರಿಯಾನಿ ಮತ್ತು ಕಾಜೂ ಹಲ್ವ ತಿಂದು ದಂಪತಿಗಳನ್ನು ಆಶೀರ್ವದಿಸಿ ಇನ್ನೊಂದು ರೈಲು ಹತ್ತಿ ಬೆಂಗಳೂರಿಗೆ ಅದೇ ದಿನ ವಾಪಸಾಗಬಹುದು.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications