ಏ.15ರಿಂದ ರಾಜ್ಯದಲ್ಲಿ ಗಣತಿ ಪ್ರಕ್ರಿಯೆ ಶುರು

ನವದೆಹಲಿಯಲ್ಲಿ ಏ.1ರಿಂದ ಮನೆ ಗಣತಿ ಕಾರ್ಯ ಆರಂಭವಾಗಿದೆ. ಕರ್ನಾಟದಲ್ಲಿ ಜನಗಣತಿ ಪ್ರಕ್ರಿಯೆ ಏ.15ರಿಂದ ಆರಂಭವಾಗಲಿದೆ . ಗಣತಿ ಕಾರ್ಯದಲ್ಲಿ ಭಾಗವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಏ.9 ರಿಂದ ಏ.13ರವರೆಗೆ ತರಬೇತಿ ನೀಡಲು ಬೆಂಗಳೂರು ಗ್ರಾಮೀಣ ಜಿಲ್ಲಾಡಳಿತ ಸಜ್ಜಾಗಿದೆ.
ಜನಗಣತಿ ಯೋಜನೆಯ ಆರಂಭಿಕ ಹಂತದಲ್ಲಿ ಮನೆ ಪಟ್ಟಿ ತಯಾರಿಕೆ ಹಾಗೂ ಮನೆ ಗಣತಿ ಕಾರ್ಯ ಏ.15ರಿಂದ ಶುರುವಾಗಲಿದ್ದು ಜೂನ್ 1ರವರೆಗೂ ಸಾಗಲಿದೆ. ಎಂದು ಉಪಾಯುಕ್ತ ಆರ್ ಕೆ ರಾಜು ಸುದ್ದಿಗಾರರಿಗೆ ತಿಳಿಸಿದರು. ಈ ಬಾರಿ 15 ವರ್ಷ ಮೇಲ್ಪಟ್ಟ ನಾಗರೀಕರೆಲ್ಲರ ಬೆರಳಚ್ಚು ಹಾಗೂ ಭಾವಚಿತ್ರ ಸಂಗ್ರಹಿಸಿ ಗುರುತು ಸಂಖ್ಯೆಯನ್ನು ನೀಡಲಾಗುವುದು. 18 ವರ್ಷ ಮೇಲ್ಪಟ್ಟವರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದು ರಾಜು ಹೇಳಿದರು.












Click it and Unblock the Notifications