ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನೇಕಲ್ ಶಾಲೆಗೆ ಹೊಸ ಗ್ರಂಥಾಲಯ

By Shami
|
Google Oneindia Kannada News

M Krishnamurthy and Krishnananda Guruji
ಆನೇಕಲ್, ಏ.1 : ಇಲ್ಲಿನ ಹಳೆ ಮಾಧ್ಯಮಿಕ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಸುಸಜ್ಜಿತ ಶಾಲಾ ಗ್ರಂಥಾಲಯದ ಉದ್ಘಾಟನಾ ಸಮಾರಂಭ ಇದೇ ಏಪ್ರಿಲ್ 3ರ ಶನಿವಾರ ನೆರವೇರಲಿದೆ. ಕಲಿಯುವ ಮಕ್ಕಳಿಗೆ ಪಠ್ಯ ಪುಸ್ತಕವಲ್ಲದೆ ಹೆಚ್ಚು ಕಲಿಯಲು ಇಚ್ಛಿಸುವ ಮಕ್ಕಳ ಪೂರಕ ಅಭ್ಯಾಸಕ್ಕೆ ಇಂಬುಕೊಡುವ ನಾನಾ ವಿಷಯ/ಶೀರ್ಷಿಕೆಗಳ ಪುಸ್ತಕಗಳು ಗ್ರಂಥಾಲಯವನ್ನು ಅಲಂಕರಿಸಲಿವೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.'ಮುಖ್ಯಮಂತ್ರಿ' ಚಂದ್ರು ಗ್ರಂಥಾಲಯವನ್ನು ಉದ್ಘಾಟಿಸಲಿದ್ದಾರೆ. ಶಾಲೆಗೆ ಮೂಲಸೌಕರ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳ ಶ್ರೇಯೋಭಿವೃದ್ಧಿಗೆ ಚಾಲಕ ಶಕ್ತಿಯಾಗಿರುವ ಶ್ರೀಕೃಷ್ಣಾನಂದ ಗುರೂಜಿ ಹಾಗೂ ಅನಿವಾಸಿ ಭಾರತೀಯ ಎಂ. ಕೃಷ್ಣಮೂರ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಹಳೆಯ ಶಾಲಾ ನಿವೇಶನದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿತ್ತು. ಇದಕ್ಕೆ ಮುನಿಶಾಮಪ್ಪ ಸ್ಮಾರಕ ಸಭಾಂಗಣ ಎಂದು ಹೆಸರಿಡಲಾಗಿದೆ. ಈ ಕಟ್ಟಡದ ಮೇಲೆ ಈಗ ಎರಡು ಹೊಸ ಕೋಣೆಗಳನ್ನು ಕಟ್ಟಲಾಗಿದ್ದು ಅದನ್ನು ಗ್ರಂಥಾಲಯ ಮತ್ತು ಕಂಪ್ಯೂಟರ್ ಕೋಣೆಯಾಗಿ ಬಳಸಲು ಶಾಲೆಯ ಆಡಳಿತ ನಿರ್ಧರಿಸಿದೆ.

ನೂತನ ಗ್ರಂಥಾಲಯ ಹಾಗೂ ಕಂಪ್ಯೂಟರ್ ಕೋಣೆಗಳ ನಿರ್ಮಾಣ ಹಾಗೂ ಮೇಜು ಕುರ್ಚಿ ಮುಂತಾದ ಶೈಕ್ಷಣಿಕ ಸಲಕರಣೆಗಳನ್ನು ಒದಗಿಸಲು ಸುಮಾರು 8 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದ್ದು ಈ ನಿಧಿಯನ್ನು ಕೃಷ್ಣಾನಂದ ಗುರೂಜಿ ಮತ್ತು ಎಂ. ಕೃಷ್ಣಮೂರ್ತಿ ಜಂಟಿಯಾಗಿ ದೇಣಿಗೆಯಾಗಿ ನೀಡಿರುತ್ತಾರೆ.

ಸಾಮಾನ್ಯವಾಗಿ ಸರಕಾರಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ತೀರಾ ದುಸ್ಥಿತಿಯಲ್ಲೇ ಕಾರ್ಯನಿರ್ವಹಿಸುತ್ತವೆ. ಸರಕಾರದಿಂದ ಯಾವುದೇ ರೀತಿಯ ಹೊಸ ನೆರವುಗಳು ಈ ಕಡೆ ಹರಿದು ಬರುವುದಿಲ್ಲ. ಹಾಗಾಗಿ, ಸ್ಥಳೀಯರು, ದಾನಿಗಳು, ಯಾವುದಾದರೂ ಸ್ವಯಂಸೇವಾಸಂಸ್ಥೆಗಳು ಅಥವಾ ಶಾಲೆಯ ಹಳೆ ವಿದ್ಯಾರ್ಥಿಗಳು 'ತಾವು ಓದಿದ ಶಾಲೆ' ಎಂಬ ಅಭಿಮಾನದಿಂದ ಸೌಕರ್ಯಗಳನ್ನು ಕಲ್ಪಿಸಿದರೆ ಉಂಟು ಇಲ್ಲವಾದರೆ ಇಲ್ಲ.

ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಪುರಸಭೆಯ ಅಧ್ಯಕ್ಷೆ ಸುಜಾತಾ ರಾಜಣ್ಣ, ಶಾಸಕ ಎ.ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ದಯಾನಂದ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಮುಂತಾದವರು ಭಾಗವಹಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X