ಭಾರತದ ಮಹಿಳಾ ನೇತಾರರಿಗೆ ಹಿಲರಿ ಪತ್ರ

ಪ್ರಿಯ ಗೌರವಾನ್ವಿತ ಅತಿಥಿಗಳೇ,
ಇಲ್ಲಿ ನೆರೆದಿರುವ ಮಹಿಳಾ ಸಬಲೀಕರಣದ ನಾಯಕರು ಹಾಗೂ ಸಮರ್ಥಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಆರ್ಥಿಕ-ಸಾಮಾಜಿಕ ಸ್ಥಿರತೆ, ಶಿಕ್ಷಣ, ಅಭಿವೃದ್ಧಿ ಕಾರ್ಯಕ್ರಮ ಹಾಗೂ ಭಾರತದಲ್ಲಿ ಮಹಿಳಾ ಸಮಾನತೆ ಕ್ಷೇತ್ರಗಳಲ್ಲಿ ತಮ್ಮ ಕೊಡುಗೆ ಅಳಿಸಲಾಗದ ಗುರುತು ಮೂಡಿಸಿವೆ. ಭಾರತೀಯ ಸಮಾಜದ ಪ್ರತಿಯೊಂದು ಸ್ಥರದಲ್ಲಿಯೂ ಮಹಿಳೆಯರ ಕೊಡುಗೆಗಳು ಗಮನಾರ್ಹ. ಭಾರತೀಯ ಇತಿಹಾಸದ ಚಿತ್ತಾರವನ್ನು ಹೆಚ್ಚು ಶ್ರೀಮಂತಗೊಳಿಸುವಲ್ಲಿ ಮಹಿಳೆಯರ ಪಾತ್ರವೂ ಬಲು ದೊಡ್ಡದು. ಭಾರತದ ಭವ್ಯ ಭವಿಷ್ಯತ್ತನ್ನು ರೂಪಿಸಲು ಮತ್ತಷ್ಟು ಮಹತ್ವದ ಅವಕಾಶಗಳು ಮಹಿಳೆಯರ ಮಡಿಲಿಗೆ ಬಿದ್ದಿವೆ.
ಭಾರತಕ್ಕೆ ಕಳೆದ ಜುಲೈ ತಿಂಗಳಲ್ಲಿ ಭೇಟಿ ನೀಡಿದಾಗ, ನಾನು ಹಲವು ಮಹತ್ವದ ನಾಯಕಿಯರನ್ನು ಭೇಟಿ ಮಾಡಿದ್ದೆ, ಅವರಲ್ಲಿ ಕೆಲವರು ಈ ಸಂಜೆಯ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದಾರೆ. ಇಂತಹ ಅಸಾಮಾನ್ಯ ಮಹಿಳಾ ನಾಯಕತ್ವ ಹೊಂದಿರುವ ಭಾರತೀಯರಿಂದ ವಿಶ್ವ ಇನ್ನಷ್ಟು ಅಪೂರ್ವ ಸಾಧನೆಯನ್ನು ನಿರೀಕ್ಷಿಸುತ್ತದೆ.
ಆರ್ಥಿಕ ಅಭಿವೃದ್ಧಿ ಹಾಗೂ ಪ್ರಜಾಪ್ರಭುತ್ವದ ಪ್ರಗತಿಗಳೆರಡೂ, ಮಹಿಳೆಯರ ಪ್ರಗತಿಯ ಮೇಲೆ ಅವಲಂಬಿತಾಗಿದೆ ಎಂದು ಇಂದು ಇಲ್ಲಿ ನೆರೆದಿರುವ ನೀವೆಲ್ಲರೂ ಗಮನಿಸಿದ್ದೀರಿ. ಮಹಿಳೆಯರ ಸಬಲೀಕರಣ ಹಾಗೂ ಸ್ವಾತಂತ್ರ್ಯಗಳು ಮಹಿಳೆಯರನ್ನು ಪ್ರವರ್ಧಮಾನಕ್ಕೆ ತರಲು ಸಹಾಯಕವಾಗುತ್ತದೆ. ಮಹಿಳೆಯರು ಏಳಿಗೆಯಾದರೆ, ಕುಟುಂಬಗಳು ಬೆಳಗುತ್ತವೆ. ಕುಟುಂಬಗಳು ಪ್ರವರ್ಧಮಾನಕ್ಕೆ ಬಂದರೆ, ಸಮುದಾಯಗಳು ಮತ್ತು ಆ ಮೂಲಕ ಇಡೀ ದೇಶವೇ ಪ್ರಕಾಶಿಸುತ್ತದೆ. ಮಹಿಳಾ ಸಬಲೀಕರಣದ ಸಾಧನೆಯನ್ನು ಮತ್ತಷ್ಟು ಹೆಚ್ಚಿಸಲು ನಾವು ಪ್ರತಿಯೊಬ್ಬರೂ ಮಹತ್ವದ ಕಾಣಿಕೆ ಕೊಡಬಹುದು. ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮಹಿಳೆಯರನ್ನು ಸಬಲಗೊಳಿಸುವ, ಶಿಕ್ಷಣ ನೀಡುವ ಹಾಗೂ ಬೆಂಬಲಿಸುವವರಿಂದ ಹಿಡಿದು, ಇಂಥ ಸಮುದಾಯಗಳನ್ನು ಬೆಂಬಲಿಸುವವರು ಅಥವಾ ಇಂಥ ಕಾರ್ಯಕ್ರಮಗಳನ್ನು ಪ್ರಾಯೋಜಿಸುವವರು ಅಥವಾ ಲಿಂಗ ತಾರತಮ್ಯದ ಕುರಿತು ಮಕ್ಕಳಿಗೆ ತಿಳಿ ಹೇಳಿ ಆತ್ಮವಿಶ್ವಾಸ ಹೆಚ್ಚಿಸುವ ನಾವೆಲ್ಲರೂ ಬಲು ಮುಖ್ಯವಾದ ಪಾತ್ರ ವಹಿಸುತ್ತಿದ್ದೇವೆ.
ನಿಮ್ಮ ದೈನಂದಿನ ದುಡಿಮೆ ಮಿಲಿಯಾಂತರ ಜನರಿಗೆ ಪ್ರೇರಣಾದಾಯಿಯಾಗಿರುವಂತೆಯೇ, ಮಹಿಳೆಯರು ಒಟ್ಟಾಗಿ ದುಡಿದಾಗ ಉಂಟುಮಾಡಬಹುದಾದ ಅದ್ಭುತ ಸಾಧನೆಗೆ ಕನ್ನಡಿಯಿದು. ನಾವೆಲ್ಲರೂ ನಮ್ಮ ಭವ್ಯ ಭವಿಷ್ಯತ್ತಿಗಾಗಿ, ನಮ್ಮ ಕುಟುಂಬಗಳಿಗಾಗಿ ಹಾಗೂ ನಮ್ಮ ದೇಶಗಳಾಗಿ ಒಟ್ಟಾಗಿ ದುಡಿದಾಗ ಕಾಣುವ ಅತ್ಯದ್ಭುತ ಸಾಧನೆಯ ಹಕ್ಕಿನೋಟವೂ ಹೌದು. ನಿಮ್ಮ ಸಾಧನೆಗಳಿಗೆ ಮತ್ತೊಮ್ಮೆ ಅಭಿನಂದನೆ, ಇಂಥ ಸ್ಮರಣೀಯ ಕಾರ್ಯಕ್ರಮಕ್ಕೆ ನನ್ನ ಹಾರ್ದಿಕ ಶುಭ ಹಾರೈಕೆಗಳು.
ತಮ್ಮ ವಿಶ್ವಾಸಿ
ಹಿಲರಿ ರೊಧಾಂ ಕ್ಲಿಂಟನ್
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications