ಭಾರತಕ್ಕೆ ಬರುವುದಿಲ್ಲ ಅಂದುಕೊಂಡಿದ್ದೆ, ರೈ

ಕಷ್ಟ ಕಾರ್ಪಣ್ಯಗಳ ನಡುವೆ ಸುಪ್ರೀಂ ಕೋರ್ಟ್ ನನ್ನ ಮೇಲಿನ ಕೊನೆಯ ಆರೋಪವನ್ನು ತಳ್ಳಿ ಹಾಕಿ ನಿರಪರಾಧಿ ಎಂದು ಘೋಷಿಸಿದ್ದರೆ ಅದಕ್ಕೆ ಈ ದೇವರೇ ಕಾರಣ. ನನ್ನ ದೇಹಕ್ಕೆ ಐದು ಗುಂಡುಗಳು ತಾಗಿದ ಮೇಲೂ ನಾನು ಬದುಕಿದ್ದರೆ ಅದಕ್ಕೆ ಈ ದೇವರೇ ಕಾರಣ. ಈ ಮಹಾಲಿಂಗೇಶ್ವರನನ್ನು ನಂಬಿದರೆ ಆತ ಎಂದೂ ಕೈಬಿಡುವುದಿಲ್ಲ ಎನ್ನುವುದಕ್ಕೆ ಈ ಮುತ್ತಪ್ಪ ರೈಯೇ ಸಾಕ್ಷಿ ಎಂದರು.
ಜೀವಮಾನದಲ್ಲಿ ಇನ್ನೆಂದೂ ಈ ಭಾರತಕ್ಕೆ ಬರುವುದಿಲ್ಲ ಎಂದು ಕೊಂಡಿದ್ದವನು ನಾನು. ಅಂತಹ ನನ್ನನ್ನು ಈ ಪುತ್ತೂರಿಗೆ ತಂದು ನಿಲ್ಲಿಸಿದ್ದು ಇನ್ಯಾರೂ ಅಲ್ಲ. ಇದೇ ಶ್ರೀ ಮಹಾಲಿಂಗೇಶ್ವರ ಎಂದು ಮುತ್ತಪ್ಪ ರೈ ತಮ್ಮ ಮಾನಸಮೂರ್ತಿಯನ್ನು ಮನಸಾ ಸ್ಮರಿಸಿದರು.
'ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ 'ಎಂದ ಬಸವಣ್ಣನ ಭಕ್ತಿ. ದೇವರಿಗೆ ಇದು ನಾನು ಕೊಡುವುದಲ್ಲ. ಇಲ್ಲಿ ನಾನು ನಿಮಿತ್ತ ಮಾತ್ರ ಎನ್ನುವ ಮುತ್ತಪ್ಪ ರೈಯ ಭೀಮಭಕ್ತಿ ಇವೆರಡಕ್ಕೂ ಸರ್ವಜನರ ಅನುಮೋದನೆ ಇದೆ. ಮುತ್ತಪ್ಪ ರೈಗಳು ನೀಡಿದ
ಬ್ರಹ್ಮರಥ ದೇವರಿಗೆ ಸಮರ್ಪಣೆಯಾಗಿದೆ.
ಹೀಗೆಂದು ಮಂಗಳ ವಚನ ನೀಡಿದವರು ಡಾ. ವೀರೇಂದ್ರ ಹೆಗ್ಗಡೆ. ಸೋಮವಾರ ಪುತ್ತೂರಿನಲ್ಲಿ ಸಂಭ್ರಮದ ಜಾತ್ರೆ. ಲಕ್ಷಾಂತರ ಮಂದಿಯ ಸಾಮೂಹಿಕ ಅವತರಣಿಕೆ. ಇವರೆಲ್ಲರ ನಡುವೆ ಕಾಣಿಸುವ ಮುತ್ತಪ್ಪ ರೈ. ಸಂಜೆಯ ಹೊತ್ತು ಶ್ರೀ ಮಹಾಲಿಂಗೇಶ್ವರನಿಗೆ ಮುಖಮಾಡಿ ನಿಂತ ವೇದಿಕೆಯಲ್ಲಿ ಸಮಾರೋಪ ಸಮಾರಂಭ. ಚಿತ್ತಾಕರ್ಷಕ ಪತಾಕೆ, ಬಣ್ಣದ ದೀಪಗಳಿಂದ ಕಂಗೊಳಿಸುವ ಬೃಹದಾಕಾರದ ಬ್ರಹ್ಮರಥ. ಡಾ. ಹೆಗ್ಗಡೆ ಅವರಿಂದ ಮುತ್ತಪ್ಪ ರೈಗಳಿಗೆ ಪೂರ್ಣ ಆಶೀರ್ವಾದ.
ಸಂಕಲ್ಪ ಶುದ್ಧವಾಗಿದ್ದರೆ ಭಗವಂತ ಅದನ್ನು ಸ್ವೀಕರಿಸುತ್ತಾನೆ. ರಥ ಕೊಡುವುದು ಮುತ್ತಪ್ಪ ರೈಗಳ ಇಚ್ಛೆಯಾಗಿದ್ದಿರಬಹುದು. ಆದರೆ ಇಂತಹ ಸುಂದರ ಕಲಾಕೃತಿಯೇ ತನಗೆ ಬೇಕು ಎಂದು ಅಪೇಕ್ಷಿಸಿದ್ದು ಮಾತ್ರ ಶ್ರೀ ಮಹಾಲಿಂಗೇಶ್ವರ. ಅದಕ್ಕಾಗಿಯೇ ಇಂತಹ ಅಪೂರ್ವ ರಥ ಇಲ್ಲಿ ಸಾಕಾರಗೊಂಡಿದೆ. ರಥ ಮತ್ತು ಎತ್ತಿನಗಾಡಿ ಎಂದೂ ಬದಲಿಸಲಾಗದ ಮೂಲ ವಾಹನ. ಬ್ರಹ್ಮರಥ ಭಾರತೀಯರ ಅನನ್ಯ ಸಂಶೋಧನೆ. ಅಂತಹ ವೈಭವದ ರಥವನ್ನು ಇಂದು ಸಿದ್ಧಪಡಿಸಿದ ಶಿಲ್ಪಿಗಳು, ಕೊಡುಗೆ ನೀಡಿದ ಮುತ್ತಪ್ಪ ರೈಗಳು ಸದಾ ನೆನಪಲ್ಲಿ ಉಳಿಯುತ್ತಾರೆ ಎಂಬುದು ಹೆಗ್ಗಡೆಯವರ ಮಾತುಗಳಾಗಿದ್ದವು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications