ತ್ವರಿತ ಅಲರ್ಟ್ ಗಳಿಗಾಗಿ
For Daily Alerts
22ಕ್ಕೆ ಮಹಾಲಿಂಗೇಶ್ವರನಿಗೆ ಬ್ರಹ್ಮರಥ ಸಮರ್ಪಣೆ
71 ಅಡಿ ಇರುವ ಮತ್ತು ರಾಜ್ಯದಲ್ಲೇ ಅತ್ಯಂತ ಎತ್ತರದ ಹೆಗ್ಗಳಿಕೆಯ ಈ ರಥವನ್ನು ಮುತ್ತಪ್ಪ ರೈ ಸುಮಾರು ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ದೇವಸ್ಥಾನಕ್ಕೆ ಅರ್ಪಿಸುತ್ತಿದ್ದಾರೆ. ಸುಮಾರು 55 ಟನ್ ಭಾರವಿರುವ ಈ ರಥವನ್ನು ಉಡುಪಿ ಮತ್ತು ಕಾಸರಗೋಡಿನಿಂದ ಬಂದ 20 ಕುಶಲಕರ್ಮಿಗಳು ತೇಗದಮರದಿಂದ ಎರಡು ವರ್ಷದ ಅವಧಿಯಲ್ಲಿ ತಯಾರಿಸಿದ್ದಾರೆ.
ಮಾರ್ಚ್ 16 ರಿಂದ ಆರಂಭಗೊಂಡು ಒಂದು ವಾರ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವರಿಗೆ ಈ ರಥ ಸಮರ್ಪಣೆಯಾಗಲಿದೆ. ತುಳುನಾಡ ಪದ್ದತಿಯಂತೆ ಮಂಗಳೂರು, ಉಡುಪಿ, ಸಕಲೇಶಪುರ, ಹಾಸನ, ಕಾಸರಗೋಡು ಮತ್ತು ಮಡಿಕೇರಿಯಿಂದ ದೇವಾಲಯಕ್ಕೆ ಭಾರೀ ಪ್ರಮಾಣದ ಹೊರೆಕಾಣಿಕೆ ಹರಿದು ಬರುತ್ತಿದೆ. ಸುಮಾರು ನಾಲ್ಕು ಲಕ್ಷ ಜನರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
Comments
Story first published: Thursday, March 18, 2010, 11:52 [IST]