ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬುಡಬುಡಿಕಿ ಮಾತು ಕೇಳಿ ಮಕ್ಕಳನ್ನೇ ಕೊಂದ!
ತಂದೆಯಿಂದಲೇ ಹತ್ಯೆಗೀಡಾದ ಮಕ್ಕಳನ್ನು ನರಸಿಂಹಮೂರ್ತಿ(6) ಮತ್ತು ನಂದಿನಿ(4) ಎಂದು ಗುರುತಿಸಲಾಗಿದೆ. ಶಾನಭೋಗನಹಳ್ಳಿಯ ಲಕ್ಷ್ಮಣ ಎಂಬಾತ ಪತ್ನಿ ಗಾಯಿತ್ರಮ್ಮ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಕ್ಕಳನ್ನು ನಾಯಕರಹಳ್ಳಿ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಂದಿದ್ದಾನೆ. ಕಳೆದ ಬುಧವಾರವೇ ಈ ಕೃತ್ಯ ನಡೆದಿದೆ.
ಭಾನುವಾರ ಮಕ್ಕಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಕ್ಕಳ ಕೊಲೆಗೆ ಕಾರಣವಾಗಿರುವ ತಂದೆ ಲಕ್ಷ್ಮಣ ನಾಪತ್ತೆಯಾಗಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments
Story first published: Monday, March 15, 2010, 11:43 [IST]