ಮಕ್ಕಳಿಂದ ಘನ ತ್ಯಾಜ್ಯ ನಿರ್ವಹಣೆ ಪಾಠ

ಈ ಕಾರ್ಯಾಗಾರದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದ ಗೃಹಸಚಿವ ವಿಎಸ್ ಆಚಾರ್ಯ ಅವರು, ರಾಜ್ಯ ಸರ್ಕಾರ ಈಗಾಗಲೇ ಘನ ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪಾಲಿಸಲು 'ನಿರ್ಮಲ ಕವಚ' ಯೋಜನೆಯನ್ನು ರೂಪಿಸಿದೆ. ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ, ನಿರ್ವಹಣೆ ಮಾಡುವ ಸ್ಥಳೀಯ ನಗರ ಪಾಲಿಕೆಗಳಿಗೆ ವಿಶೇಷ ಅನುದಾನವನ್ನು ಕೂಡ ನೀಡಲಾಗುತ್ತದೆ ಎಂದರು.
20 ಮೈಕ್ರಾನ್ ಮೇಲ್ಪಟ್ಟ ಪ್ಲಾಸ್ಟಿಕ್ ಪದಾರ್ಥಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಮುಂಬರುವ ದಿನಗಳಲ್ಲಿ 30 ರಿಂದ 40 ಮೈಕ್ರಾನ್ ಪ್ಲಾಸ್ಟಿಕ್ ಸ್ಯಾಚೆಗಳ ಬಳಕೆ ನಿಷೇಧಿಸುವ ಚಿಂತನೆ ನಡೆದಿದೆ ಎಂದರು. ಘನ ತ್ಯಾಜ್ಯ ಕಾರ್ಯಾಗಾರದಲ್ಲಿ ತ್ಯಾಜ್ಯದ ಬಗ್ಗೆ ವಿವರಣೆ, ನಿರ್ವಹಣೆ ಕುರಿತು ಪರಿಸರ ತಜ್ಞರಿಂದ ಉಪನ್ಯಾಸಗಳಿದ್ದವು.












Click it and Unblock the Notifications