ಸದನದಲ್ಲಿ ಯಾದವರ ವ್ಯರ್ಥ ಕದನ

ಮೇಲ್ಮನೆಯಲ್ಲಿ ಪಕ್ಷ ಸದಸ್ಯರನ್ನು ಮಾರ್ಷಲ್ ಮೂಲಕ ಹೊರಹಾಕಿದ್ದರಿಂದ ಯಾದವದ್ವಯರು ಅಸಮಾಧಾನಗೊಂಡಿದ್ದರು. ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಂಡ ಬೆನ್ನಲ್ಲೇ ಅವಿಶ್ವಾಸ ಗೊತ್ತುವಳಿ ಮಂಡಿಸುವುದಾಗಿ ಹೇಳಿದ್ದರು. ಸಂವಿಧಾನದ ನಿಯಮಗಳ ಪ್ರಕಾರ ಅವಿಶ್ವಾಸ ಗೊತ್ತುವಳಿಗೆ ಕನಿಷ್ಠ 50 ಸದಸ್ಯರು ಸಹಿ ಹಾಕಬೇಕು. ಪ್ರಸ್ತುತ ಆರ್ ಜೆಡಿ ಹಾಗೂ ಎಸ್ಪಿ ಅಷ್ಟು ಸಂಖ್ಯಾಬಲ ಹೊಂದಿಲ್ಲ. ಇತರ ಪಕ್ಷಗಳಿಂದಲೂ ಬೆಂಬಲ ದೊರಕುವ ನಿರೀಕ್ಷೆ ಇಲ್ಲ. ಯುಪಿಎ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಕಾಲ ಇನ್ನೂ ಪಕ್ವವಾಗಿಲ್ಲ ಎಂದು ಬಿಜೆಪಿ ಹೇಳಿದೆ.












Click it and Unblock the Notifications