ದಾವಣಗೆರೆಗೆ ರಾಷ್ಟ್ರಪತಿ ಮನ್ನಣೆ

ಕರ್ನಾಟಕದ ಅತ್ಯುತ್ತಮ ಐಪಿಎಸ್ ಅಧಿಕಾರಿಗಳಲ್ಲಿ ದಾವಣಗೆರೆ ಪೂರ್ವ ವಲಯದ ಸತ್ಯನಾರಾಯಣ ರಾವ್ ಈಗ ಪ್ರಮುಖರ ಪಟ್ಟಿಗೆ ಸೇರಿದ್ದಾರೆ. ಮೂಲತಃ ಕೋಲಾರ ಜಿಲ್ಲೆಯವರಾದ ಇವರು ಈವರೆಗಿನ ಸೇವಾವಧಿಯಲ್ಲಿ ಎಲ್ಲೂ ಹೆಸರು ಕೆಡಿಸಿಕೊಂದವರಲ್ಲ. ಬೀದರ್, ಬೆಂಗಳೂರು, ಬೆಳಗಾವಿ ಮುಂತಾದ ಕಡೆ ಎಸ್ಪಿ ಆಗಿ ಕೆಲಸ ಮಾಡಿರುವ ಸತ್ಯನಾರಾಯಣ ಶುದ್ದ ಹಸ್ತರು ಎಂಬ ನಂಬಿಕೆ ಉಳಿಸಿಕೊಂಡಿದ್ದಾರೆ.
ಬೀದರ್ ನಲ್ಲಿ ಥಿಯೇಟರ್ ಗೆ ಬಾಂಬ್ ಬಿದ್ದಾಗ ಅಂದಿನ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ್ದರು. ಬೆಂಗಳೂರಿನಲ್ಲಿ ಡಿಸಿಪಿ ಆಗಿದ್ದಾಗ ಜಯನಗರದ ದರ್ಗಾ ಗಲಾಟೆಯನ್ನು ತಹಬಂದಿಗೆ ತಂದಿದ್ದರು. ಎರಡು ಜನಾಂಗದ ಮನವೊಲಿಸುವಲ್ಲಿ ಪ್ರಮುಖ ಪಾತ್ರದಾರಿ ಇವರೇ ಆಗಿದ್ದರು. 2003ರಲ್ಲಿ ಮೈಸೂರಿನ ಕರ್ನಾಟಕ ಪೋಲಿಸ್ ಅಕಾಡೆಮಿಯಲ್ಲಿ ಡಿಐಜಿ ಆಗಿದ್ದಾಗ ಮಾಡಿದ ದಕ್ಷ ಕೆಲಸಕ್ಕಾಗಿ ರಾಷ್ಟ್ರಪತಿಗಳಿಂದ ಮೆರಿತೋರಿಯಸ್ ಮೆಡಲ್ ಪಡೆದಿದ್ದರು. ಮಂಗಳೂರಿನಲ್ಲಿದ್ದಾಗ ನಕ್ಷಲರ ಕಾಟವನ್ನು ತಹಬಂದಿಗೆ ತರುವಲ್ಲಿ ಸತ್ಯನಾರಾಯಣ ರಾವ್ ಯಶಸ್ವಿಯಾಗಿದ್ದರು. ದಾವಣಗೆರೆ ಪೂರ್ವ ವಲಯಕ್ಕೆ ಐಜಿ ಯಾಗಿ ಬಂದು ಕುಂತ ಮೇಲೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ತಮ್ಮ ಹಿಡಿತ ಸಾಧಿಸಿದವರು. ಬಳ್ಳಾರಿಯಂತಹ ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಯನ್ನು ಚುನಾವಣಾ ಸಂದರ್ಭದಲ್ಲಿ ಕಾಪಾಡಿದ್ದು ಇವರ ಹೆಗ್ಗಳಿಕೆ. ಇದೆಲ್ಲದರ ಪ್ರತಿಫಲವೇ ರಾಷ್ಟ್ರಪತಿ ಪದಕ.
ಇನ್ನು ದಾವಣಗೆರೆ ಎಸ್ಪಿ ಸಂದೀಪ್ ಪಾಟೀಲ್ ಅವರಿಗೆ ಕರ್ನಾಟಕದ ಅತ್ಯುನ್ನತ ಎಸಿ ಎಂಬ ಬಿರುದು ಮುಖ್ಯಮಂತ್ರಿಗಳ ಪದಕದಿಂದ ದೊರೆತಿದೆ. ದಾವಣಗೆರೆಯ ಮಾಂಗಲ್ಯ ಕಳ್ಳರು, ಜೇಬುಗಳ್ಳರನ್ನು ಒಟ್ಟು ಮಾಡಿ ಕ್ಯಾಂಪ್ ನೆಪದಲ್ಲಿ ಯೋಗ, ಧ್ಯಾನ, ಪೂಜೆಯಲ್ಲಿ ತೊಡಗಿಸಿ ನೂರು ಹುಡುಗರನ್ನು ಸರಿದಾರಿಗೆ ತರುವಲ್ಲಿ ಯಶಸ್ವಿಯಾದ ಫಾಲವೇ ಸಂದೀಪ್ ಪಾಟಿಲ್ ಅವರಿಗೆ ಮುಖ್ಯಮಂತ್ರಿ ಪದಕ.
ಮಳೆ ನೀರು ಸಂರಕ್ಷಣೆಗೆ ಭಾರಿ ಒತ್ತು ಕೊಟ್ಟ ಜಿಲ್ಲಾಧಿಕಾರಿ ಅಮರ ನಾರಾಯಣ್ ರಾಜ್ಯ ಸರಕಾರದಿಂದ ಪ್ರಶಸ್ತಿ ಪಡೆದು ಪರಿಸರ ಜಾಗೃತಿಗೆ ಕಾರಣಕರ್ತರಾಗಿದ್ದಾರೆ. ಹಾಗೇ ಚಿತ್ರದುರ್ಗದ ಸುಮಾರು ಹತ್ತೊಂಬತ್ತು ಹೊಂಡಗಳನ್ನು ಸ್ವಚ್ಛಗೊಳಿಸಿ ಅಂತರ್ಜಲ ಹೆಚ್ಚಿಸಲು ಮುಂದಾಗಿದ್ದರು. ಕೇಂದ್ರ ನೀರು ಸಂರಕ್ಷಣೆ ಅಧ್ಯಯನ ತಂಡದ ರವೀಂದ್ರ ಪ್ರಸಾದ್ ಸ್ವತಃ ರಾಜ್ಯಕ್ಕೆ ಬಂದು ಇವರ ಕಾರ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.
ಅಂತೂ ದಾವಣಗೆರೆಗೆ ಈ ಬಾರಿ ಮೂರು ಪ್ರಶಸ್ತಿಗಳ ಗರಿಗೆದರಿಕೊಂಡಿದೆ. ಜಿಲ್ಲೆಯ ಮೂವರು ಉನ್ನತ ಅಧಿಕಾರಿಗಳಿಗೆ ಪ್ರಶಸ್ತಿ ಬಂದಿರುವುದು ಸಂತೋಷದ ವಿಚಾರವೇ .
(ಕಾಂತರಾಜ್ ಅರಸ್, ಹಾಯ್ ಬೆಂಗಳೂರ್)
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications