ಸಂಪಂಗಿ ಕ್ಲೀನ್ ಚಿಟ್ ಗೆ ಹೆಗ್ಡೆ ಆಕ್ಷೇಪ
ಬೆಂಗಳೂರು,
ಮಾ. 3 : ಕೊಟ್ಟವನು ಕೋಡಂಗಿ, ಇಸ್ಕೊಂಡವನು ಸಂಪಂಗಿ, ಸದನ ಸಮಿತಿ ವರದಿ ಬಗ್ಗೆ ಲೋಕಾಯುಕ್ತ ಸಂತೋಷ ಹೆಗ್ಡೆ ನೀಡಿದ ಪ್ರತಿಕ್ರಿಯೆ. ಸಾಮಾಜಿಕ ಬದಲಾವಣೆಯಲ್ಲಿ ಪತ್ರಿಕೆಗಳ ಪಾತ್ರ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. id="toptextpromo">ನ್ಯಾಯಮೂರ್ತಿ
ಹೆಗ್ಡೆ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡುವುದಕ್ಕೆ ಮುನ್ನ ವೇದಿಕೆಯಲ್ಲಿದ್ದ ಗಣ್ಯರೊಬ್ಬರು ಕೋಡಂಗಿ ಎಂಬ ಪದ ಬಳಸಿದರು. ಸಂಪಂಗಿ ಪ್ರಕರಣದಲ್ಲಿ ಚಾಟಿ ಏಟು ಬೀಸಲು ಲೋಕಾಯುಕ್ತರಿಗೆ ಇಷ್ಟೇ ಸಾಕಾಯ್ತು. ಅವರು ಇಡೀ ಕಥಾ ಭಾಗವನ್ನು ಕೊಟ್ಟವ ಕೋಡಂಗಿ, ಇಸ್ಕೊಂಡವ ಸಂಪಂಗಿ ಎಂದು ಒಂದೇ ವಾಕ್ಯದಲ್ಲಿ ವ್ಯಾಖ್ಯಾನಿಸಿದರು. id='are-slot-1' class='oiad oi-axt oiadv'> id='top-searched-articles'>ಸಂಪಂಗಿಯನ್ನು
ಶಾಸಕರ ಭವನದಲ್ಲಿ ಬಂಧಿಸಿದ್ದು ಹಕ್ಕು ಚ್ಯುತಿಯಾಗುವುದಿಲ್ಲ. ಏಕೆಂದರೆ ಅದಕ್ಕೂ ಸದನದ ಕಲಾಪಕ್ಕೂ ಸಂಬಂಧವಿಲ್ಲ, ಜೊತೆಗೆ ವಿಚಾರಣೆಗೆ ಹಾಜರಾಗಿಲ್ಲ ಎಂಬ ಕಾರಣ ನೀಡಿ ಫಾರೂಕ್ ಗೆ ವಾಗ್ದಂಡನೆ ವಿಧಿಸುವಂತೆ ಸೂಚಿಸಲಾಗಿದೆ. ಇದರಲ್ಲಿಯೂ ಅರ್ಥವಿಲ್ಲ. ಏಕೆಂದರೆ ಆತನಿಗೆ ಸಮಿತಿ ವಿಚಾರಣೆ ಮೇಲೆ ವಿಶ್ವಾಸವಿಲ್ಲದೇ ಇರಬಹುದು. ಹೀಗಾಗಿ ಸಮಿತಿಯ ವರದಿಗೆ ಯಾವುದೇ ಬೆಲೆ ಇಲ್ಲ ಎಂದು ಹೆಗ್ಡೆ ವಿವರಿಸಿದರು.











Click it and Unblock the Notifications