ವಿವಿ ಜಾಗ ಹಸ್ತಾಂತರ ಗೊತ್ತೆ ಇಲ್ಲ: ರಾಜ್ಯಪಾಲ

ಟ್ರಸ್ಟ್ ಗೆ ಭೂಮಿ ನೀಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲ ಹಂಸ್ ರಾಜ್ ಭಾರದ್ವಾಜ್, ಈ ಕುರಿತು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಅವರಿಂದ ವಿವರಣೆ ಕೇಳಲು ಮುಂದಾಗಿದ್ದಾರೆ. ಹೀಗಾಗಿ ಸರಕಾರ ಮತ್ತು ರಾಜ್ಯಪಾಲರ ನಡುವಿನ ಮುಸುಕಿನ ಗುದ್ದಾಟಕ್ಕೆ ವಿಜಯನಗರ ಪುನಶ್ಚೇತನ ಪ್ರತಿಷ್ಠಾನಟ್ರಸ್ಟ್ ವಿವಾದ ಹೊಸ ಸೇರ್ಪಡೆಯಾಗಿದೆ.
ಅಖಿಲ ಭಾರತ ವೀರಶೈವ ಮಹಾಸಭಾದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸಿದ್ದಯ್ಯಸ್ವಾಮಿ ನೇತೃತ್ವದ ನಿಯೋಗವು ವಿಜಯನಗರ ಪ್ರತಿಷ್ಠಾನ ಪುನಶ್ಚೇತನ ಟ್ರಸ್ಟ್ ಗೆ ವಿವಿ ಭೂಮಿ ನೀಡುವುದನ್ನು ವಿರೋಧಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತ್ತು. ಹಂಪಿ ವಿವಿಗೆ ಸೇರಿದ 80ಎಕರೆ ಭೂಮಿಯನ್ನು ಟ್ರಸ್ಟ್ ಗೆ ವರ್ಗಾಯಿಸಲು ಸರಕಾರ ಮುಂದಾಗಿದೆ.












Click it and Unblock the Notifications