ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಐಸಿ ವಿರೋಧಿಸಿ ಸಂಸತ್ ಚೆಲೋ

By Mrutyunjaya Kalmat
|
Google Oneindia Kannada News

Devegowda
ಬೆಂಗಳೂರು,ಫೆ. 28 : ನೈಸ್ ಯೋಜನೆ ವಿರುದ್ದ ಹೋರಾಟದ ರೂಪದಲ್ಲಿ ರಾಜ್ಯದ ರೈತರಿಂದ ಮತ್ತೊಮ್ಮೆ ಸಂಸತ್ ಚೆಲೋ ಮಾಡಿಸಲು ಮಾಜಿ ದೇವೇಗೌಡ ಮುಂದಾಗಿದ್ದಾರೆ.

ಗೌಡರ ನೇತೃತ್ವದಲ್ಲಿ 1,500 ರೈತರು ಬಿಎಂಐಸಿ ಯೋಜನೆ ವಿರೋಧಿಸಿ ಧರಣಿ ನಡೆಸಲು ಮಾರ್ಚ್ 7 ರಂದು ದೆಹಲಿಗೆ ಹೊರಡಲಿದ್ದಾರೆ. ದಿಲ್ಲಿ ತಲುಪಿ ದೆಹಲಿ 10 ಮತ್ತು 11 ರಂದು ಪ್ರತಿಭಟನೆ ನಡೆಸಲಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಎಂಐಸಿ ಯೋಜನೆ ವಿರುದ್ಧ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಲು ರೈತರನ್ನು ಕರೆದೊಯ್ಯಲು ನಿರ್ಧರಿಸಲಾಗಿದೆ. ಹಿರಿಯ ನ್ಯಾಯವಾದಿಗಳು, ಎಡಪಕ್ಷ ಮತ್ತು ದಲಿತ ಸಂಘರ್ಷ ಸಮಿತಿ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ನೈಸ್ ಕಂಪನಿ ವಂಚನೆ ಬಗ್ಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ಎಲ್ ಕೆ ಅಡ್ವಾಣಿ ಅವರಿಗೂ ಮನವಿ ಸಲ್ಲಿಸುವುದಾಗಿ ಅವರು ಹೇಳಿದರು. ಹಿಂದೆ ವಾಜಪೇಯಿ ಸರಕಾರವಿದ್ದಾಗ ದೇವೇಗೌಡ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾವಿರಾರು ರೈತರನ್ನು ವಿಶೇಷ ರೈಲಿನಲ್ಲಿ ಕರೆದುಕೊಂಡು ಹೋಗಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X