Get Updates
Get notified of breaking news, exclusive insights, and must-see stories!

ತೆಂಡೂಲ್ಕರ್ ಗೆ ಭಾರತರತ್ನ ಸಿಗಲಿ: ಕಪಿಲ್ ದೇವ್

Sachin Tendulkar
ನವದೆಹಲಿ, ಫೆ. 26: ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತಿನ 'ಕೊಹಿನೂರ್' ಎಂದು ಹೊಗಳಿದ ಕಪಿಲ್ ದೇವ್ ಅವರು ಸಚಿನ್ ಗೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಲಭಿಸಲಿ ಎಂದು ಹಾರೈಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾರೆಯಾಗಿ 31,041 ರನ್ ಗಳು ಹಾಗೂ 93 ಶತಕಗಳನ್ನು ಬಾರಿಸಿರುವ ಸಚಿನ್ ಸರ್ವಶ್ರೇಷ್ಠ. ಏಕದಿನ ಪಂದ್ಯದಲ್ಲಿ ಪ್ರಪ್ರಥಮ ದ್ವಿಶತಕ ಗಳಿಸಿದ ಕೀರ್ತಿಯನ್ನು ಹೊಂದಿದ್ದಾರೆ. ದಾಖಲೆಗಳಿಗಿಂತ ಸಚಿನ್ ಭಾರತದ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಕ್ರಿಕೆಟ್ ಕ್ಷೇತ್ರದಲ್ಲಿ ವಜ್ರದಂತೆ ಕಂಗೊಳಿಸುತ್ತಿದ್ದಾರೆ ಎಂದು ಕಪಿಲ್ ಹೇಳಿದರು.

ವಿಡಿಯೋ:ವಿಶ್ವದಾಖಲೆ ಸಾಧನೆ ಮೆರೆದ ಸಚಿನ್

ತೆಂಡೂಲ್ಕರ್ ಗೆ ಬೇರೆ ಯಾರೂ ಸಾಟಿಯಿಲ್ಲ. ದಾಖಲೆ ಮುರಿಯುವುದು ದೊಡ್ಡ ವಿಷಯವಲ್ಲ. ಆದರೆ, 20 ವರ್ಷಗಳ ಕಾಲ ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಂಡು ಒಂದೇ ಲಯದಲ್ಲಿ ಆಡುತ್ತಿರುವ ಸಚಿನ್ ನಿಜಕ್ಕೂ ಅದ್ಭುತ ಎಂದು ಸ್ತುತಿಸಿದ ಅಜಿತ್ ವಾಡೇಕರ್, ಸಚಿನ್ ಗೆ ಭಾರತ ರತ್ನ ಸಿಗಲೇ ಬೇಕು ಎಂದು ಕಪಿಲ್ ಮಾತನ್ನು ಅನುಮೋದಿಸಿದರು.

ಸಚಿನ್ ತೆಂಡೂಲ್ಕರ್ ಗೆ 2008 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ.ಅಲ್ಲದೆ, ರಾಜೀವ್ ಗಾಂಧಿ ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಗಳು ಸಂದಿವೆ. ಮಹಾರಾಷ್ಟ್ರ ರಾಜ್ಯದ ಅತ್ಯುನ್ನತ ಪ್ರಶಸ್ತಿ, ಮಧ್ಯಪ್ರದೇಶದ ಗೌರವಗಳು ಸಿಕ್ಕಿವೆ.ಇನ್ನುಳಿದಿರುವುದು ಭಾರತ ರತ್ನ ಮಾತ್ರ ಅದೂ ಆದಷ್ಟು ಬೇಗ ಸಿಗಲಿ ಎಂಬುದು ಅಭಿಮಾನಿಗಳ ಹಾರೈಕೆ.ಒಂದು ವೇಳೆ ಸಚಿನ್ ಗೆ ಭಾರತ ರತ್ನ ಲಭಿಸಿದರೆ, ಭಾರತದ ಅತ್ಯುನ್ನತ ಗೌರವ ಪಡೆದ ಮೊದಲ ಕ್ರೀಡಾಪಟು ಎನಿಸಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+