ಏಕದಿನ ಪಂದ್ಯದ ಪ್ರಪ್ರಥಮ ದ್ವಿಶತಕವೀರ ಸಚಿನ್

ಐವತ್ತು ಓವರುಗಳಲ್ಲಿ ಭಾರತ ಕೇವಲ ಮೂರು ವಿಕೆಟ್ ಕಳೆದುಕೊಂಡು 401 ರನ್ ಬೃಹತ್ ಮೊತ್ತ ದಾಖಲಿಸಿದೆ. ದಕ್ಷಿಣ ಆಫ್ರಿಕಾದ ಬೌಲರುಗಳನ್ನು ಮನಬಂದಂತೆ ಚಚ್ಚಿದ ಧೋನಿ ಪಡೆ ಚಿಕ್ಕ ಮೈದಾನದಲ್ಲಿ ರನ್ ಮಳೆ ಸುರಿಸಿದೆ. ಒಟ್ಟು ಮೊತ್ತದ ಅರ್ಧದಷ್ಟು ರನ್ ಬಂದಿದ್ದು ಸಚಿನ್ ಬ್ಯಾಟಿನಿಂದ. ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸಚಿನ್ ಆಟ ಕ್ರಿಕೆಟ್ಟಿಗೆ ಅವರು ಕಾಲಿಟ್ಟ ಆರಂಭಿಕ ದಿನಗಳ ಆಟವನ್ನು ನೆನಪಿಸುವಂತಿತ್ತು.
ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದ್ದು ಸಾರ್ಥಕವಾಯಿತು. ಆರಂಭದಲ್ಲೇ ಸೆಹ್ವಾಗ್(9 ರನ್) ಅವರ ವಿಕೆಟ್ ಕಳೆದುಕೊಂಡರೂ ಸಚಿನ್ ಜೊತೆಗೂಡಿದ ದಿನೇಶ್ ಕಾರ್ತಿಕ್ ಭಾರತ ಬೃಹತ್ ಮೊತ್ತವನ್ನು ದಾಖಲಿಸಲು ನೆರವಾದರು. ದಿನೇಶ್ ಕಾರ್ತಿಕ್ 79(85 ಎಸೆತಗಳು, 4 ಬೌಂಡರಿ, 3 ಸಿಕ್ಸರ್) ಎಂದಿನ ಶೈಲಿಯಲ್ಲಿ ಸುಲಲಿತವಾಗಿ ರನ್ ಗಳಿಸಿದರು. ಕಾರ್ತಿಕ್ ವಿಕೆಟ್ ಪತನ ನಂತರ ಯೂಸೂಫ್ ಪಠಾಣ್ 23 ಎಸೆತಗಳಲ್ಲಿ 36 ರನ್ ಗಳಿಸಿ, ಸಚಿನ್ ಗೆ ಉತ್ತಮ ಬೆಂಬಲ ನೀಡಿದರು. ಯೂಸೂಫ್ ಆಟದಲ್ಲಿ 4 ಬೌಂಡರಿ, 2 ಸಿಕ್ಸರ್ ಗಳಿದ್ದವು. ನಂತರ ಬಂದ ನಾಯಕ ಎಂಎಸ್ ಧೋನಿ ಬಿರುಸಿನ ಆಟ ಪ್ರದರ್ಶಿಸಿ ಕೇವಲ 35 ಎಸೆತಗಳಲ್ಲಿ 68 ರನ್ ಗಳಿಸಿದರು. ಅವರ ಮೊತ್ತದಲ್ಲಿ 7 ಬೌಂಡರಿ, 4 ಸಿಕ್ಸರ್ ಗಳು ಸೇರಿವೆ.
ವಿಡಿಯೋ:ವಿಶ್ವದಾಖಲೆ ಸಾಧನೆ ಮೆರೆದ ಸಚಿನ್
ಸಿಡಿಲ ಮರಿ ದ್ವಿಶತಕ: ಜಿಂಬಾಬ್ವೆಯ ಬ್ಯಾಟ್ಸ್ಮನ್ ಚಾರ್ಲ್ಸ್ ಕೊವೆಂಟ್ರಿಯ (ಅಜೇಯ 194) ಹೆಸರಿನಲ್ಲಿದ್ದ ಏಕದಿನ ಕ್ರಿಕೆಟ್ನಲ್ಲಿ ವೈಯಕ್ತಿಕ ಸರ್ವಾಧಿಕ ರನ್ಗಳ ದಾಖಲೆಯನ್ನು ಸಚಿನ್ ಸರ್ವನಾಶ ಮಾಡಿದರು. 200 ರನ್ ಗಳಿಸಿ ಅಜೇಯರಾಗಿ ಉಳಿದರು. ಇದಕ್ಕೂ ಮುನ್ನ ಭಾರತ ವಿರುದ್ಧ 1997 ಮೇನಲ್ಲಿ ಚೆನ್ನೈನಲ್ಲಿ ಸಯೀದ್ ಅನ್ವರ್ 194 ರನ್ ಗಳಿಸಿ ಔಟಾಗಿದ್ದರು.
ಒಂದು ಹಂತದಲ್ಲಿ ಧೋನಿ ಅವರ ಆರ್ಭಟದ ಆಟದಿಂದ ಸಚಿನ್ ದ್ವಿಶತಕ ಸಾಧನೆಯಿಂದ ವಂಚಿತರಾಗುವ ಸಾಧ್ಯತೆ ಕಂಡು ಬಂದಿತ್ತು. ಆದರೆ, ಕೊನೆಯ ಓವರ್ ನಲ್ಲಿ ಸಚಿನ್ ಸ್ಟ್ರೈಕ್ ಸಿಕ್ಕಾಗ ಒಂದು ರನ್ ಗಳಿಸಿ ಪ್ರಪ್ರಥಮ ದ್ವಿಶತಕ ಗಳಿಸಿದ ಸಾಧನೆ ಮೆರೆದರು. 147 ಎಸೆತಗಳಲ್ಲಿ ಸಚಿನ್ ಗಳಿಸಿದ ದ್ವಿಶತಕ ಮೊತ್ತದಲ್ಲಿ 25 ಬೌಂಡರಿ, 3 ಸಿಕ್ಸರ್ ಗಳಿತ್ತು ಎಂದರೆ ಅವರ ಆಟದ ತೀವ್ರತೆಯನ್ನು ಊಹಿಸಬಹುದು. ದಕ್ಷಿಣ ಆಫ್ರಿಕಾಗೆ 402 ರನ್ ಗಳ ಬೃಹತ್ ಮೊತ್ತವನ್ನು ಭಾರತ ಒಡ್ಡಿದೆ.
ಗ್ವಾಲಿಯರ್ ಪಂದ್ಯದ ನೇರ ವೀಕ್ಷಕ ವಿವರಣೆಗೆ
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications