ಚಕ್ಕಾಗಳು ಯಾವ ಇಲಾಖೆಯಡಿ ಬರುತ್ತಾರೆ?

ಮಂಗಳಮುಖಿಯರ ಬಂಧನಕ್ಕೆ ಕಾನೂನಿನಲ್ಲಿ ತೊಡಕಿದೆ. ಇವರು ಯಾವ ಇಲಾಖೆ ಅಡಿ ಬರುತ್ತಾರೆ ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಆದಾಗ್ಯೂ ಭಿಕ್ಷಾಟನೆ ನಿರ್ಮೂಲನೆಯ ನಿಟ್ಟಿನಲ್ಲಿ ಇವರನ್ನು ಬಂಧಿಸುವುದು ಅನಿವಾರ್ಯ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ. ಚಕ್ಕಾಗಳ ಹಾವಳಿ ತಡೆಗಟ್ಟುವುದಕ್ಕೆ ಮತ್ತು ಅವರ ಬಾಳಿಗೊಂದು ದಾರಿತೋರಿಸುವುದಕ್ಕೆ ಪ್ರತ್ಯೇಕವಾದ ಒಂದು ಇಲಾಖೆ ತೆರೆಯಬೇಕೆಂದು ದಟ್ಸ್ ಕನ್ನಡ ಸಲಹೆ ಮಾಡುತ್ತದೆ.
ನಗರದಲ್ಲಿ ಭಿಕ್ಷುಕರನ್ನು ಬಂಧಿಸಲು ಎಂಟು ವಾಹನಗಳನ್ನು ನೀಡಲಾಗಿದೆ. ಮೆಜಿಸ್ಟಿಕ್, ಮಾರುಕಟ್ಟೆ, ಕೋರಮಂಗಲ,ವಿಜಯನಗರ, ಅತ್ತಿಗುಪ್ಪೆ, ಬಸವವನಗುಡಿ, ಕಾಮಾಕ್ಯ, ಪೀಣ್ಯ ಸೇರಿದಂತೆ ಹಲವು ತಾಣಗಳಲ್ಲಿ ಸುತ್ತಾಡಿ ಭಿಕ್ಷುಕರನ್ನು ಹಿಡಿದು ಪುನರ್ವಸತಿ ಕೇಂದ್ರಕ್ಕೆ ಕರೆತರಲಾಗುವುದು. ಇಲ್ಲಿ ಎರಡು ಸಾವಿರ ಮಂದಿಗೆ ಸ್ಥಳಾವಕಾಶವಿದೆ. ಸದ್ಯ 1100 ಮಂದಿ ಇದ್ದಾರೆ, ಸಂಖ್ಯೆ ಹೆಚ್ಚಾದರೆ ನಗರಕ್ಕೆ ಸಮೀಪದಲ್ಲಿರುವ ಇತರ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಿಕೊಡಲಾಗುವುದು ಎಂದು ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಹಿಜಡಾಗಳ ಹಾವಳಿ ಇತ್ತೀಚೆಗೆ ಅತಿಯಾಗಿದೆ. ಟ್ರಾಫಿಕ್ ಸಿಗ್ನಲ್ ಬಳಿ ಇವರ ಕಾಟ ಅಷ್ಟಿಟ್ಟಲ್ಲ. ಆಟೋ ಚಾಲಕರನ್ನು ನಿತ್ಯ ಸುಲಿಗೆ ಮಾಡುವುದು, ದ್ವಿಚಕ್ರವಾಹನ ಚಾಲಕರನ್ನು ಪೀಡಿಸಿ ಗೋಳುಹುಯ್ದುಕೊಳ್ಳುವುದು ನಿತ್ಯ ಅವ್ಯಾಹತವಾಗಿ ನಡೆಯುತ್ತಿದೆ. ಕುಂಟರು ಕುರುಡರು ಕಡುಬಡವ ಮುದುಕರಿಗೆ ನಾಕಾಣೆ ಭಿಕ್ಷೆ ಹಾಕುವುದು ಒಂದು ರೀತಿ , ಒಂದು ನೀತಿ. ಆದರೆ, ಚಿನ್ನಾರಿ ಮೆತ್ತಿಕೊಂಡ ಬಣ್ಣಬಣ್ಣದ ಸೀರೆ, ಚೂಡಿದಾರ್ ಗಳನ್ನು ಧರಿಸಿ, ಲೋಲಾಕುಗಳನ್ನು ಇಳಿಬಿಟ್ಟುಕೊಂಡು, ನವವಧುವಿನಂತೆ ನೆಕ್ ಲೇಸು, ಕನಕಾಂಬರ ಹೂವು ಮುಡಿದುಕೊಂಡು ಭಿಕ್ಷೆಯ ಹೆಸರಲ್ಲಿ ವಯ್ಯಾರದಿಂದ ಸುಲಿಗೆ ಮಾಡುವ ಚಕ್ಕಗಳನ್ನು ಅರೆಸ್ಟ್ ಮಾಡುವ ಸಚಿವ ಸುಧಾಕರ್ ಅವರ ಚಿಂತನೆ ಸರಿಯಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications