ಚಕ್ಕಾಗಳು ಯಾವ ಇಲಾಖೆಯಡಿ ಬರುತ್ತಾರೆ?

ಮಂಗಳಮುಖಿಯರ ಬಂಧನಕ್ಕೆ ಕಾನೂನಿನಲ್ಲಿ ತೊಡಕಿದೆ. ಇವರು ಯಾವ ಇಲಾಖೆ ಅಡಿ ಬರುತ್ತಾರೆ ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಆದಾಗ್ಯೂ ಭಿಕ್ಷಾಟನೆ ನಿರ್ಮೂಲನೆಯ ನಿಟ್ಟಿನಲ್ಲಿ ಇವರನ್ನು ಬಂಧಿಸುವುದು ಅನಿವಾರ್ಯ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ. ಚಕ್ಕಾಗಳ ಹಾವಳಿ ತಡೆಗಟ್ಟುವುದಕ್ಕೆ ಮತ್ತು ಅವರ ಬಾಳಿಗೊಂದು ದಾರಿತೋರಿಸುವುದಕ್ಕೆ ಪ್ರತ್ಯೇಕವಾದ ಒಂದು ಇಲಾಖೆ ತೆರೆಯಬೇಕೆಂದು ದಟ್ಸ್ ಕನ್ನಡ ಸಲಹೆ ಮಾಡುತ್ತದೆ.
ನಗರದಲ್ಲಿ ಭಿಕ್ಷುಕರನ್ನು ಬಂಧಿಸಲು ಎಂಟು ವಾಹನಗಳನ್ನು ನೀಡಲಾಗಿದೆ. ಮೆಜಿಸ್ಟಿಕ್, ಮಾರುಕಟ್ಟೆ, ಕೋರಮಂಗಲ,ವಿಜಯನಗರ, ಅತ್ತಿಗುಪ್ಪೆ, ಬಸವವನಗುಡಿ, ಕಾಮಾಕ್ಯ, ಪೀಣ್ಯ ಸೇರಿದಂತೆ ಹಲವು ತಾಣಗಳಲ್ಲಿ ಸುತ್ತಾಡಿ ಭಿಕ್ಷುಕರನ್ನು ಹಿಡಿದು ಪುನರ್ವಸತಿ ಕೇಂದ್ರಕ್ಕೆ ಕರೆತರಲಾಗುವುದು. ಇಲ್ಲಿ ಎರಡು ಸಾವಿರ ಮಂದಿಗೆ ಸ್ಥಳಾವಕಾಶವಿದೆ. ಸದ್ಯ 1100 ಮಂದಿ ಇದ್ದಾರೆ, ಸಂಖ್ಯೆ ಹೆಚ್ಚಾದರೆ ನಗರಕ್ಕೆ ಸಮೀಪದಲ್ಲಿರುವ ಇತರ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಿಕೊಡಲಾಗುವುದು ಎಂದು ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಹಿಜಡಾಗಳ ಹಾವಳಿ ಇತ್ತೀಚೆಗೆ ಅತಿಯಾಗಿದೆ. ಟ್ರಾಫಿಕ್ ಸಿಗ್ನಲ್ ಬಳಿ ಇವರ ಕಾಟ ಅಷ್ಟಿಟ್ಟಲ್ಲ. ಆಟೋ ಚಾಲಕರನ್ನು ನಿತ್ಯ ಸುಲಿಗೆ ಮಾಡುವುದು, ದ್ವಿಚಕ್ರವಾಹನ ಚಾಲಕರನ್ನು ಪೀಡಿಸಿ ಗೋಳುಹುಯ್ದುಕೊಳ್ಳುವುದು ನಿತ್ಯ ಅವ್ಯಾಹತವಾಗಿ ನಡೆಯುತ್ತಿದೆ. ಕುಂಟರು ಕುರುಡರು ಕಡುಬಡವ ಮುದುಕರಿಗೆ ನಾಕಾಣೆ ಭಿಕ್ಷೆ ಹಾಕುವುದು ಒಂದು ರೀತಿ , ಒಂದು ನೀತಿ. ಆದರೆ, ಚಿನ್ನಾರಿ ಮೆತ್ತಿಕೊಂಡ ಬಣ್ಣಬಣ್ಣದ ಸೀರೆ, ಚೂಡಿದಾರ್ ಗಳನ್ನು ಧರಿಸಿ, ಲೋಲಾಕುಗಳನ್ನು ಇಳಿಬಿಟ್ಟುಕೊಂಡು, ನವವಧುವಿನಂತೆ ನೆಕ್ ಲೇಸು, ಕನಕಾಂಬರ ಹೂವು ಮುಡಿದುಕೊಂಡು ಭಿಕ್ಷೆಯ ಹೆಸರಲ್ಲಿ ವಯ್ಯಾರದಿಂದ ಸುಲಿಗೆ ಮಾಡುವ ಚಕ್ಕಗಳನ್ನು ಅರೆಸ್ಟ್ ಮಾಡುವ ಸಚಿವ ಸುಧಾಕರ್ ಅವರ ಚಿಂತನೆ ಸರಿಯಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications