ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿತಿನ್ ಗಡ್ಕರಿ ವಿರುದ್ಧ ಗರ್ಜಿಸಿದ ಬಾಳ ಠಾಕ್ರೆ
ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಠಾಕ್ರೆ ಬರೆಯುತ್ತಾ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಂರು ಸಹಕರಿಸಬೇಕು ಎಂದು ಹೇಳುವ ಮೂಲಕ ಗಡ್ಕರಿ ಅವರು ರಾಮಮಂದಿರ ಗಲಭೆಯಲ್ಲಿ ಹುತಾತ್ಮರಾದ ಸಾವಿರಾರು ಮಂದಿ ಕರಸೇವಕರಿಗೆ ಅಪಮಾನ ಮಾಡಿದ್ದಾರೆ ಎಂದು ಜರಿದಿದ್ದಾರೆ.
ಹಿಂದುತ್ವ ಸಿದ್ಧಾಂತವನ್ನು ಬಿಜೆಪಿ ಬಿಡಬಾರದು ಎಂದು ಆಗ್ರಹಿಸಿರುವ ಠಾಕ್ರೆ, ಜಾಮಾ ಮಸೀದಿಯ ಇಮಾನ್ ಕಾಲಿಗೆ ಎರಗಿ ರಾಮಮಂದಿರಕ್ಕಾಗಿ ಸ್ಥಳಪಡೆಯುವುದು ಸುಲಭ. ಆದರೆ ಹಿಂದುಗಳು ರಾಮಮಂದಿರಕ್ಕಾಗಿ ರಕ್ತಪಾತ ಹರಿಸಿದ್ದನ್ನು ಮರೆಯಬಾರದು ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಠಾಕ್ರೆ ಅವರ ಹೇಳಿಕೆ ಬಿಜೆಪಿ ಮಿತ್ರಕೂಟದಲ್ಲಿ ಮತ್ತಷ್ಟು ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆಯಿದೆ.
Comments
shiv sena bal thackeray ಶಿವಸೇನೆ ಮುಸ್ಲಿಂ ಸಾಮ್ನಾ ram temple ರಾಮಮಂದಿರ ಬಾಳ ಠಾಕ್ರೆ ಅಯೋಧ್ಯೆ nitin gadkari ನಿತಿನ್ ಗಡ್ಕರಿ
Story first published: Saturday, February 20, 2010, 14:15 [IST]