ನಿತಿನ್ ಗಡ್ಕರಿ ವಿರುದ್ಧ ಗರ್ಜಿಸಿದ ಬಾಳ ಠಾಕ್ರೆ

Thackeray slams Gadkari's Ram temple statement
ಮುಂಬೈ, ಫೆ.20: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂರು ಸಹಕರಿಸಬೇಕು ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಗರ್ಜಿಸಿದ್ದಾರೆ. ಹಾಗೆ ಮಾಡಿದರೆ ಹುತಾತ್ಮರಾದ ಅಯೋಧ್ಯೆಯ ಕರಸೇವಕರಿಗೆ ಅವಮಾನ ಮಾಡಿದಂತೆ ಎಂದು ಠಾಕ್ರೆ ಪ್ರತಿಕ್ರಿಯಿಸಿದ್ದಾರೆ.

ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಠಾಕ್ರೆ ಬರೆಯುತ್ತಾ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಂರು ಸಹಕರಿಸಬೇಕು ಎಂದು ಹೇಳುವ ಮೂಲಕ ಗಡ್ಕರಿ ಅವರು ರಾಮಮಂದಿರ ಗಲಭೆಯಲ್ಲಿ ಹುತಾತ್ಮರಾದ ಸಾವಿರಾರು ಮಂದಿ ಕರಸೇವಕರಿಗೆ ಅಪಮಾನ ಮಾಡಿದ್ದಾರೆ ಎಂದು ಜರಿದಿದ್ದಾರೆ.

ಹಿಂದುತ್ವ ಸಿದ್ಧಾಂತವನ್ನು ಬಿಜೆಪಿ ಬಿಡಬಾರದು ಎಂದು ಆಗ್ರಹಿಸಿರುವ ಠಾಕ್ರೆ, ಜಾಮಾ ಮಸೀದಿಯ ಇಮಾನ್ ಕಾಲಿಗೆ ಎರಗಿ ರಾಮಮಂದಿರಕ್ಕಾಗಿ ಸ್ಥಳಪಡೆಯುವುದು ಸುಲಭ. ಆದರೆ ಹಿಂದುಗಳು ರಾಮಮಂದಿರಕ್ಕಾಗಿ ರಕ್ತಪಾತ ಹರಿಸಿದ್ದನ್ನು ಮರೆಯಬಾರದು ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಠಾಕ್ರೆ ಅವರ ಹೇಳಿಕೆ ಬಿಜೆಪಿ ಮಿತ್ರಕೂಟದಲ್ಲಿ ಮತ್ತಷ್ಟು ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+