ಸಿಬಿಐ ತನಿಖೆಗೆ ಸರಕಾರಗಳ ಅನುಮತಿ ಬೇಕಿಲ್ಲ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ದ 150 ಕೋಟಿ ರುಪಾಯಿಗಳ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರವಾಸೋಧ್ಯಮ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ವಿಶೇಷ ಪೀಠ ಈ ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್ ನ ಕಲಂ 226 ಮತ್ತು ಸುಪ್ರಿಂಕೋರ್ಟ್ ನ ಕಲಂ 32 ವಿಧಿಯನ್ವಯ ಮುಂದಿನ ದಿನಗಳಲ್ಲಿ ಅತಿ ವಿಶೇಷ ಪ್ರಕರಣಗಳು ಎನಿಸಿದ ಪ್ರಕರಣಗಳನ್ನು ನೇರವಾಗಿ ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ಗಳು ಸಿಬಿಐ ತನಿಖೆಗೆ ವಹಿಸಬಹುದು ಎಂದು ಅಭಿಪ್ರಾಯಪಟ್ಟಿದೆ.











Click it and Unblock the Notifications