ಟೆಕ್ಕಿಗಳ ದಾಂಪತ್ಯಕ್ಕೆ ಕುತ್ತಾದ ತತ್ತಿ..!

ಮೊಟ್ಟೆ ತಿನ್ನಲು ವಿರೋಧಿಸುತ್ತಿರುವ ಅತ್ತೆ, ಈ ವಿಷಯದಲ್ಲಿ ತಾಯಿ ಪರ ವಕಾಲತ್ತು ವಹಿಸಿರುವ ಪತಿ ಹಾಗೂ ಚಿಕ್ಕಪುಟ್ಟ ವಿಷಯಗಳಿಂದ ಬೇಸತ್ತು ಪತಿಯನ್ನೇ ತೊರೆಯಲು ತೀರ್ಮಾನಿಸಿರುವ ಪತ್ನಿ. ಆಕೆಯೂ ಕೂಡಾ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಸಮಸ್ಯೆ ಉದ್ಭವಿಸಿರುವ ಉನ್ನತ ಶಿಕ್ಷಣ ಹೊಂದಿರುವ ಸಾಫ್ಟ್ ವೇರ್ ದಂಪತಿಗಳಲ್ಲಿ ಎನ್ನುವುದು ವಿಶೇಷವಾಗಿದೆ.
ಪತಿ, ಪತ್ನಿ ಇಬ್ಬರೂ ಬ್ರಾಹ್ಮಣರು. ಇಬ್ಬರೂ ಜಗತ್ತಿನ ಬಗ್ಗೆ ಸ್ಪಷ್ಟ ಅರಿವುಳ್ಳವರು. ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ಇವರ ವಿವಾಹ ನೆರವೇರಿದೆ. ಮಧುಚಂದ್ರಕ್ಕೆ ಸಿಂಗಾಪುರಕ್ಕೆ ತೆರಳಿದ್ದ ಈ ದಂಪತಿಗಳು ಅಲ್ಲಿಯೇ ಜಗಳ ಮಾಡಿಕೊಂಡಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾದಲ್ಲಿ ನೆಲೆಸಿದ್ದ ಪತ್ನಿ ಅಲ್ಲಿ ಸಂಸ್ಕೃತಿ ಹಾಗೂ ಉಡುಗೆ ತೊಡುಗೆಗಳಿಗೆ ಒಗ್ಗಿಕೊಂಡಿದ್ದಾರೆ. ಪತ್ನಿ ಮಿನಿ ಸ್ಕರ್ಟ್ ಗಳನ್ನು ತೊಡುವುದು ಪತಿಗೆ ಇಷ್ಟವಾಗಲಿಲ್ಲ. ಸಾಲದೆಂಬಂತೆ ಮಂಗಳಸೂತ್ರವನ್ನೂ ಆಕೆ ತೆಗೆದಿಡುವುದು ಪತಿಗೆ ನುಂಗಲಾರದ ತುತ್ತಾಯಿತು. ಅಲ್ಲಿಂದಲೇ ಶುರುವಾದ ಕೌಟುಂಬಿಕ ವಿರಸ ವಿಚ್ಛೇದನ ಹಂತಕ್ಕೆ ಬಂತು ತಲುಪಿದೆ.
ಇದರ ಜೊತೆಗೆ ಪತಿಯದು ಸಂಪ್ರದಾಯಸ್ಥ ಕುಟುಂಬ. ಮನೆಯಲ್ಲಿ ನಿತ್ಯವೂ ಸೊಸೆ ಅಮ್ಲೇಟ್ ಮಾಡಿಕೊಂಡು ತಿನ್ನುವುದು ಅತ್ತೆಗೆ ಅಪಥ್ಯವಾಯಿತು. ಇದರಿಂದ ಮನೆ ಕುರುಕ್ಷೇತ್ರವಾಯಿತು. ಕೊನೆಯದಾಗಿ ಪತ್ನಿಗೆ ವಿಚ್ಛೇದನ ನೀಡಲು ಪತಿ ಮುಂದಾಗಿದ್ದಾರೆ. ಇದೆಲ್ಲದರ ಜೊತೆಗೆ ಪತಿ ಸಲ್ಲಿಸಿದ ಅರ್ಜಿಯಲ್ಲಿ ಪತ್ನಿಯ ನಡತೆ ಸರಿಯಿಲ್ಲ. ಆಕೆಗೆ ಪರಪುರಷನೊಂದಿಗೆ ಸಂಬಂಧವಿದೆ. ಶಾಂಪಿಂಗ್ ಗೆ ತೆರೆಳಿದರೆ ವಿಪರೀತ ಖರ್ಚು ಮಾಡುತ್ತಾಳೆ ಇತ್ಯಾದಿ ಕಾರಣ ನೀಡಿ ವಿಚ್ಛೇದನಕ್ಕೆ ಕೋರಿದ್ದಾರೆ. ಇದು ಉನ್ನತ ಶಿಕ್ಷಣ ಹೊಂದಿದ ಹಾಗೂ ಮೇಲ್ಮಧ್ಯಮ ವರ್ಗದ ಕುಟುಂಬದಲ್ಲಿ ನಡೆದಿರುವ ಘಟನೆಯಾಗಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications