ಒಂಬತ್ತು ಜನರನ್ನು ಬಲಿ ತೆಗೆದುಕೊಂಡ ಲಾರಿ

ಕಬ್ಬಿನ ಕಟಾವನ್ನು ಸಾಗಿಸುತ್ತಿದ್ದ ಲಾರಿ ಚಾಲಕನ ಅಜಾಗರೂಕತೆಯಿಂದ ಬಸ್ಸಿಗಾಗಿ ಕಾಯುತ್ತಿದ್ದ ಏಳಗಿ ಗ್ರಾಮದ ಜನರ ಮೇಲೆ ಹರಿದಿದೆ. ನಂತರ ಪಲ್ಟಿ ಹೊಡೆದಿದ್ದರಿಂದ ಲಾರಿಯಲ್ಲಿದ್ದವರು ಕೂಡ ಮೃತರಾಗಿದ್ದಾರೆ. ಲಾರಿಯಲ್ಲಿದ್ದ ಕಾರ್ಮಿಕರು ಮಹಾರಾಷ್ಟ್ರಕ್ಕೆ ಸೇರಿದವರೆಂದು ತಿಳಿದುಬಂದಿದೆ.
ಸತ್ತವರಲ್ಲಿ ಇಬ್ಬರು ಹಸುಳೆ ಮತ್ತು ಓರ್ವ ಮಹಿಳೆಯಿದ್ದಾರೆ. ಮಹಿಳೆಯ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತರಾಗಿದ್ದಾರೆ. ಗಾಯಗೊಂಡ 22 ಜನರನ್ನು ಜಿಲ್ಲಾಆಸ್ಪತ್ರೆಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications