ಹುಲಿ ಬಂತು ಹುಲಿ ಲೆಕ್ಕ ಹಾಕಿ ಬೇಗ!

ಜನವರಿಯಿಂದ ಹುಲಿಜಾಡು ಹುಡುಕಿಕೊಂಡು ಹೊರಟ ಎರಡು ತಂಡಗಳು ಸುಮಾರು 643 ಕಿ.ಮೀಗಳಷ್ಟು ಅರಣ್ಯ ಪ್ರದೇಶವನ್ನು ಕ್ರಮಿಸಿದರು. ಸುಮಾರು 170 ಕ್ಕೂ ಹೆಚ್ಚು ಪರಿಸರ ಪ್ರೇಮಿ ಸದಸ್ಯರುಗಳು ಸ್ವಯಂಪ್ರೇರಿತರಾಗಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷ. ಕೆಲವರು ಮೊದಲ ಬಾರಿಗೆ ನೈಜವಾದ ಹುಲಿ ನೋಡಿ ಖುಷಿಪಟ್ಟರೆ ಮತ್ತೆ ಕೆಲವರು ಹುಲಿ ಹೆಜ್ಜೆ ನೋಡಿ ತೃಪ್ತಿ ಹೊಂದಿದರು. ಹುಣಸೂರು ಅರಣ್ಯ ವಿಭಾಗದ ಅಧಿಕಾರಿ ವಿಜಯ್ ರಂಜನ್ ಸಿಂಗ್ ಅವರ ನೇತೃತ್ವದಲ್ಲಿ ನಾಗರಹೊಳೆಯಲ್ಲಿ ಗಣತಿ ಕಾರ್ಯ ನಡೆಸಲಾಯಿತು.
ಮನುಷ್ಯರ ವಾಸನೆ ಅರಿತ ಹುಲಿಗಳು ತಮ್ಮ ಪಥ ಬದಲಿಸಿ, ತಂಡಕ್ಕೆ ಸಾಕಷ್ಟು ಬೆವರಿಳಿಸಿದ್ದಂತೂ ಸತ್ಯ. ಹುಲಿ ಗಣತಿ ಜೊತೆಗೆ ಅಕರ್ಷಕ ಗಿಡ ಮರ, ಪಕ್ಷಿ ಪ್ರಾಣಿಗಳ ಬಗ್ಗೆ ಕೂಡ ಮಾಹಿತಿ ಸಂಗ್ರಹ ಮಾಡಲಾಯಿತು. ಲಭ್ಯ ಮಾಹಿತಿಯನ್ನು ದಾಂಡೇಲಿಯ ಅರಣ್ಯ ಇಲಾಖೆಗೆ ನೀಡಲಾಗುತ್ತದೆ. ರಾಜ್ಯದಲ್ಲಿರುವ ಹುಲಿ ಸಂತತಿಯ ನಿಖರ ಅಂಕಿ ಅಂಶ ತಿಳಿಯಲು ಇನ್ನು ತಿಂಗಳಾದರೂ ಕಾಯಬೇಕು. ಸಂತಸದ ಸಂಗತಿಯೆಂದರೆ ಕಳೆದ ಬಾರಿಯ ಗಣತಿಗೆ ಹೋಲಿಸಿದರೆ ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ಕಳೆದ ವರ್ಷದ ಗಣತಿಯಲ್ಲಿ 65ಹುಲಿಗಳು ಮಾತ್ರ ಕಾಣಿಸಿದ್ದವು.
ಅಂದಾಜು ಎಷ್ಟು ಹುಲಿಗಳಿವೆ?: ಮೂರು ವರ್ಷದ ಕೆಳಗೆ ನಡೆಸಲಾದ ಗಣತಿಯ ಪ್ರಕಾರ ಭಾರತದಲ್ಲಿ ಸುಮಾರು 1,500 ರಿಂದ 1,657 ಹುಲಿಗಳು ಕಂಡುಬಂದಿದ್ದವು.ವಿಶ್ವದೆಲ್ಲೆಡೆ ಸುತ್ತಾಟ ನಡೆಸಿ ಶೋಧಿಸಿದರೂ, ಬೆಂಗಾಲದ 'ರಾಯಲ್' ಹುಲಿ, ಪಟ್ಟೆ ಹುಲಿ, ಬಿಳಿ ಹುಲಿ ಎಲ್ಲವನ್ನು ಒಟ್ಟುಗೂಡಿಸಿದರೂ ನಿಮ್ಮ ಕಣ್ಣಿಗೆ ಕಾಣಸಿಗುವುದು ಕೇವಲ 3,500 ಹುಲಿಗಳು ಮಾತ್ರಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಡುತ್ತಾರೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications