ಬೆಂಗಳೂರಿಗೆ ಆರೆಸ್ಸೆಸ್ ಮುಖಂಡರ ದಂಡು

ಸಮಾನ ಮನಸ್ಕ ಸೇವಾಸಂಸ್ಥೆಗಳ ಈ ಸಮಾವೇಶದಲ್ಲಿ ಸುಮಾರು 700 ಸಂಸ್ಥೆಗಳಿಂದ ಆಗಮಿಸುವ 1500 ಕ್ಕೂ ಹೆಚ್ಚು ಕಾರ್ಯಕರ್ತರು ಪರಸ್ಪರ ವಿಚಾರ ವಿನಿಮಯ ಮತ್ತು ಕಾರ್ಯಾವಲೋಕನ ಮಾಡಲಿದ್ದಾರೆ ಎಂದು ಸೇವಾ ಸಂಗಮದ ಅಧ್ಯಕ್ಷ ಸೀತಾರಾಮ ಕೆದಿಲಾಯ ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ನಡೆಯಲಿರುವ ಸೇವಾ ಸಂಗಮದ ಶಿಬಿರದಲ್ಲಿ ಸಮಾಜಕಾರ್ಯಕ್ಕಾಗಿ ತಮ್ಮ ಜೀವನವನ್ನುಮುಡಿಪಾಗಿಟ್ಟಿರುವ ನಾಡಿನ ಪ್ರಮುಖರು ಹಾಗೂ ಆರ್.ಎಸ್.ಎಸ್.ನ ಹಿರಿಯ ಅಧಿಕಾರಿಗಳು ಸ್ವಂಸೇವಕರಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ಸಾಮಾಜಿಕ ಪರಿವರ್ತನೆಯ ಮೂಲಕ ರಾಷ್ಟ್ರ ಪುನರ್ನಿರ್ಮಾಣ ಎನ್ನುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತದಿಂದ ಪ್ರೇರಣೆ ಪಡೆದು ಸಾವಿರಾರು ಸ್ವಯಂಸೇವಕರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸುಮಾರು 1,57,000 ದಷ್ಟು ಸೇವಾ ಚಟುವಟಿಕೆಗಳ
ಮೂಲಕ ಸಮಾಜೋಪಯೋಗೀ ಫಲಿತಾಂಶಗಳನ್ನೂ ಈ ಕಾರ್ಯಕರ್ತರು ನೀಡುತ್ತಿದ್ದಾರೆ ಎಂದು ಕೆದಿಲಾಯ ವಿವರಿಸಿದರು.
ಕಾರ್ಯಕ್ರಮದ ವಿವರಗಳು : ಫೆಬ್ರವರಿ 6 ಶನಿವಾರ ಬೆಳಗ್ಗೆ 9.30 ಗೆ ಸೇವಾಕಾರ್ಯಗಳ ಪ್ರದರ್ಶಿನಿಯ ಉದ್ಘಾಟನೆ. ಬೆಳಗ್ಗೆ 11 ಗಂಟೆಗೆ ಸೇವಾಸಂಗಮ 2010 ರ ಉದ್ಘಾಟನೆ ಶ್ರೀ ರವಿಶಂಕರ್, ಸ್ಥಾಪಕರು ದಿ ಆರ್ಟ್ ಆಫ್ ಲಿವಿಂಗ್ ಅವರಿಂದ. ಭಾಷಣ : ಕೆ.ಎಸ್. ಸುದರ್ಶನ್, ಭೂತಪೂರ್ವ ಸರಸಂಘಚಾಲಕರು, ಆರ್.ಎಸ್.ಎಸ್.
ಫೆಬ್ರವರಿ 7 ಭಾನುವಾರ ಬೆಳಗ್ಗೆ 11 ಗಂಟೆಗೆ ಸ್ವಯಂಸೇವಾ ಸಂಸ್ಥೆಗಳ ಮಿಲನ. ಸಂಜೆ 5.30 ಕ್ಕೆ ಸಾರ್ವಜನಿಕ ಸಮಾರಂಭ. ಭಾಷಣ : ಮೋಹನ್ ಭಾಗವತ್, ಸರಸಂಘಚಾಲಕರು, ಆರ್.ಎಸ್.ಎಸ್.
ಫೆಬ್ರವರಿ 8 ಸೋಮವಾರ ಸೇವಾಸಂಗಮದಲ್ಲಿ ಭಾಗವಹಿಸುವ ಆರ್.ಎಸ್.ಎಸ್.ನ ಹಿರಿಯರು: ಭಯ್ಯಾಜಿ ಜೋಶಿ, ಸರಕಾರ್ಯವಾಹರು. ದತ್ತಾತ್ರೇಯ ಹೊಸಬಾಳೆ, ಸಹ ಸರಕಾರ್ಯವಾಹರು, ಮದನದಾಸ ದೇವಿ, ಸೀತಾರಾಮ್ ಕೆದಿಲಾಯ ಮೊದಲಾದವರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications