ರಾಜ್ಯದಲ್ಲಿ ಮುಂದುವರೆದ ಚರ್ಚ್ ದಾಳಿ
ಮೈಸೂರು/ಮುರುಡೇಶ್ವರ,
ಜ.25: ಭಾನುವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮೈಸೂರಿನ ಹೋಲಿ ಫ್ಯಾಮಿಲಿ ಚರ್ಚ್ ಹಾಗೂ ಮುರುಡೇಶ್ವರ ಸಮೀಪದ ಸೆಂಟ್ ಅಂಥೋಣಿ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಚರ್ಚ್ ಗಳ ಆವರಣದಲ್ಲಿರುವ ಮೂರ್ತಿಗಳನ್ನು ಧ್ವಂಸ ಮಾಡಿ, ಕಿಟಕಿ ಗಾಜುಗಳನ್ನು ಒಡೆಯಲಾಗಿದೆ . id="toptextpromo">1999ರಲ್ಲಿ
ಸ್ಥಾಪನೆಯಾದ ಮೈಸೂರಿನ ಹೋಲಿ ಫ್ಯಾಮಿಲಿ ಚರ್ಚ್ ಮೇಲೆ 2002 ರಲ್ಲೇ ದಾಳಿ ನಡೆದಿತ್ತು. ಆ ಪ್ರಕರಣ ಸದ್ಯ ಕೋರ್ಟ್ ನಲ್ಲಿದೆ. ಆದರೆ, ಈ ಬಾರಿ ನಡೆದಿರುವ ದಾಳಿ ಉದ್ದೇಶ ಪೂರ್ವಕವಾಗಿ ಮಾಡಲಾಗಿದೆ. ಇಲ್ಲಿ ಯಾವುದೇ ಮತಾಂತರ ನಡೆದಿಲ್ಲ. ಆದರೂ ಈ ರೀತಿ ಕೃತ್ಯ ನಡೆದಿರುವುದು ಖಂಡನೀಯ. ಕ್ರೈಸ್ತ ಕನ್ನ್ನಡ ಸಂಘದ ಮುಖ್ಯಸ್ಥ ರಾಯಪ್ಪ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>2002
ರಲ್ಲಿ ನಡೆದ ದಾಳಿಗೆ ಕ್ರಮ ಕೈಗೊಳ್ಳಲಾಗಿದೆ. ಅದರ ವಿಚಾರಣೆ ಮುಂದಿನ ತಿಂಗಳು ನಡೆಯಲಿದೆ. ಸದರಿ ಪ್ರಕರಣದ ದೂರನ್ನು ವಿಜಯನಗರ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಕಳೆದ ಆರು ತಿಂಗಳಲ್ಲಿ ಚರ್ಚ್ ನ ಹುಂಡಿ ದೋಚಲು ಪ್ರಯತ್ನ ನಡೆಸಲಾಗಿದೆ ಎಂದು ದೂರು ನೀಡಿದ್ದರು. ಆದರೆ, ಈ ಬಾರಿ ಕಾಣಿಕೆ ಹುಂಡಿಯನ್ನು ಒಡೆದಿಲ್ಲ, ಇದು ಕಿಡಿಗೇಡಿಗಳ ಕೃತ್ಯ ಎಂದು ಪ್ರಾಥಮಿಕ ವರದಿಗಳಿಂದ ಕಂಡು ಬಂದಿದೆ . ಆದರೂ ಯಾವ ಕಾರಣಕ್ಕೆ ದಾಳಿ ನಡೆದಿದೆ ಎಂದು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ. ಪ್ರತಿಮೆ ಮುರಿದಿದೆ ತನಿಖೆ ಜಾರಿಯಲ್ಲಿದೆ ಎಂದು ಎಸ್ ಪಿ ಸುನೀಲ್ ಅಗರವಾಲ್ ಹೇಳಿದರು.ಚರ್ಚ್
ದಾಳಿ
ನಿರಂತರ:
ಉತ್ತರಕನ್ನಡಜಿಲ್ಲೆಯ
ಮುರುಡೇಶ್ವರ
ಬಳಿಯ
ಪೆರ್ನಮಕ್ಕಿಯ
ಸೆಂಟ್
ಅಂಥೋಣಿ
ಚರ್ಚ್
ಮೇಲೆ
ಕೂಡ
ದಾಳಿ
ನಡೆದಿದ್ದು,
ಗಾಜುಗಳನ್ನು
ಒಡೆದು
ಹಾಕಲಾಗಿದೆ.
ಶ್ವಾನ
ದಳದೊಡನೆ
ಬಂದ
ಸ್ಥಳೀಯ
ಪೊಲೀಸರು
ಪ್ರಕರಣ
ದಾಖಲಿಸಿಕೊಂಡು
ವಿಚಾರಣೆ
ನಡೆಸುತ್ತಿದ್ದಾರೆ.
ಆನೇಕಲ್,
ಹುಸ್ಕೂರ್
ಗೇಟ್,
ಭಟ್ಕಳ,
ಬೀದರ್
ಚರ್ಚ್
ದಾಳಿ
ಪ್ರಕರಣ
ನಂತರ
ಮೈಸೂರು
ಹಾಗೂ
ಮುರುಡೇಶ್ವರದಲ್ಲಿ
ದಾಳಿ
ಸಂಭವಿಸಿದೆ.
ನ್ಯಾ.
ಸೋಮಶೇಖರ
ಅವರ
ಆಯೋಗ
ಚರ್ಚ್
ದಾಳಿ
ಪ್ರಕರಣದ
ತನಿಖೆ
ನಡೆಸುತ್ತಿದೆ.












Click it and Unblock the Notifications