ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಷ್ಣು, ದೇವಿಶೆಟ್ಟಿಗೆ ಪದ್ಮಭೂಷಣ ಶಿಫಾರಸು

By Mrutyunjaya Kalmat
|
Google Oneindia Kannada News

Karnataka govt recommends vishnu and devishetty for padma award
ಬೆಂಗಳೂರು, ಜ. 22 : ಇತ್ತೀಚೆಗೆ ಅಗಲಿದ ಸಾಹಸಿಂಹ ಡಾ ವಿಷ್ಣುವರ್ಧನ್ ಹಾಗೂ ನಾರಾಯಣ ಹೃದಯಾಲಯದ ಡಾ ದೇವಿಶೆಟ್ಟಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡುವಂತೆ ರಾಜ್ಯ ಸರಕಾರದ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ.

ಕನ್ನಡ ಚಿತ್ರರಂಗದ ಮೇರುನಟ ವಿಷ್ಣುವರ್ಧನ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕು ಎಂದು ದಟ್ಸ್ ಕನ್ನಡ ಈ ಹಿಂದೆಯೇ ಒತ್ತಾಯಿಸಿತ್ತು. ದಟ್ಸ್ ಕನ್ನಡ ಹಾಗೂ ಒನ್ ಇಂಡಿಯಾ(ಇಂಗ್ಲಿಷ್) ಸೈಟ್ ಎರಡರಲ್ಲೂ ಈ ಲೇಖನ ಪ್ರಕಟಿಸಲಾಗಿತ್ತು. ವಿಷ್ಣುವರ್ಧನ್ ಅವರಿಗೆ 2006ರಲ್ಲಿಯೇ ಅಂದಿನ ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದರು. ಆದರೆ, ಕೇಂದ್ರ ಸರಕಾರ ಕನ್ನಡ ಕಲಾವಿದನಿಗೆ ಪದ್ಮ ಪ್ರಶಸ್ತಿಗೆ ಪರಿಗಣಿಸಿರಲಿಲ್ಲ. ಇಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮುಖ್ಯಮಂತ್ರಿ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಪದ್ಮಭೂಷಣ ನೀಡುವಂತೆ ಶಿಫಾರಸ್ಸು ಮಾಡಿದೆ. ಶಿಫಾರಸ್ಸು ಮಾತ್ರ ಸಾಲದು ಅದರ ಪ್ರಾಮಾಣಿಕ ಪ್ರಯತ್ನವೂ ಅವಶ್ಯಕವಾಗಿದೆ.

ವಿಡಿಯೋ: ಡಾ. ವಿಷ್ಣುವರ್ಧನ್ ಗೆ ಅಂತಿಮ ನಮನ

ವಿಷ್ಣುವರ್ಧನ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಬೇಕು ಎಂದು ರಾಜ್ಯಸರಕಾರ ಕಳೆದ ನಾಲ್ಕು ದಿನಗಳ ಹಿಂದೆಯೇ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಡಾ ರಾಜ್ ಕುಮಾರ್ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದರು. ವಿಷ್ಣುವರ್ಧನ್ ಜೊತೆಗೆ ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ ದೇವಿಶೆಟ್ಟಿ ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X