ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡ್ಲೆಕಾಯಿ ಪರಿಷೆ ಅಲ್ಲ ಪುಸ್ತಕ ಪರಿಷೆ

|
Google Oneindia Kannada News

ಬೆಂಗಳೂರು, ಜ. 12 : ಬಸವನಗುಡಿಯಲ್ಲಿ ಕಡ್ಲೆಕಾಯಿ ಪರಿಷೆ ಪ್ರತಿವರ್ಷ ನಡೆಯುತ್ತಿರುವುದು ಯಾರಿಗೆ ತಾನೇ ಗೊತ್ತಿಲ್ಲ. ಅದೇ ಸ್ಥಳದಲ್ಲಿ ಸೃಷ್ಟಿ ವೆಂಚರ್ಸ್ ಬಳಗವು ಪುಸ್ತಕ ಪರಿಷೆ (ತಮಗೊಂದು ಪುಸ್ತಕ ಉಚಿತವಾಗಿ ಮತ್ತು ತಮ್ಮಿಂದಷ್ಟು ಪುಸ್ತಕಗಳು ಮೇಳಕ್ಕಾಗಿ...) ಎಂಬ ವಿನೂತನ ಪುಸ್ತಕ ವಿನಿಮಯ ಮೇಳವನ್ನು ಜನವರಿ 17 ರಂದು ಆಯೋಜಿಸಿದೆ.

ಈ ವಿನೂತನ ಪುಸ್ತಕ ಮೇಳದ ವಿಶೇಷವೆಂದರೆ, ಮೇಳದಲ್ಲಿ ಭಾಗವಹಿಸುವವರು ಉಚಿತವಾಗಿ ಪುಸ್ತಕವನ್ನು ಪಡೆಯಬಹುದು. ಮತ್ತು ತಾವು ಓದಿ ಮುಗಿಸಿದ, ಇತರರಿಗೆ ಉಪಯುಕ್ತವಾಗುವ ಪುಸ್ತಕಗಳನ್ನು ಭಂಡಾರಕ್ಕೆ ಅರ್ಪಿಸಬಹುದು. ವಿಕಾಸದ ಶಕ್ತಿ ಕೇಂದ್ರಗಳಲ್ಲೊಂದಾದ ಪುಸ್ತಕಗಳು ನಿಂತ ನೀರಿನಂತೆ ಇರಬಾರದು. ಅವು ಹಸ್ತದಿಂದ ಹಸ್ತಕ್ಕೆ, ಮಸ್ತಕದಿಂದ ಮಸ್ತಕಕ್ಕೆ ಸಂಚರಿಸಿ ಇರುವಿಕೆಯ ಸಾರ್ಥಕತೆಯನ್ನು ಸಾಧಿಸಬೇಕು ಎನ್ನುವುದು ಸೃಷ್ಟಿ ವೆಂಚರ್ಸ್ ಸಂಸ್ಥೆ ಅಭಿಲಾಷೆಯಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ನಾಗರಾಜ ನಾವುಂದ ದಟ್ಸ್ ಕನ್ನಡಕ್ಕೆ ಹೇಳಿದರು

ಪುಸ್ತಕ ಪರಿಷೆ ನಡೆಯುವ ಸ್ಥಳ- ನಂ-81, 1 ನೇ ಮಹಡಿ, ಇಎಟಿ ರಸ್ತೆ, ಎನ್ ಆರ್ ಕಾಲೋನಿ (ಪುಳಿಯೋಗರೆ ಪಾಯಿಂಟ್ ಮೇಲೆ), ಬಸವನಗುಡಿ, ಬೆಂಗಳೂರು-04. ಮೊಬೈಲ್-99450 03479, 94481 71069

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X