ದೇಶದ 10 ವಿಜ್ಞಾನಿಗಳಿಗೆ ಉಗ್ರರಿಂದ ಭಯ

ಪರಮಾಣು, ರಕ್ಷಣೆ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿನ ವಿಜ್ಞಾನಿಗಳಿಗೆ ಉಗ್ರರಿಂದ ಬೆದರಿಕೆ ವ್ಯಕ್ತಗೊಂಡಿದೆ. ಮಸ್ಕತ್ ನಿಂದ ಗಡೀಪಾರುಗೊಂಡಿರುವ ಸರ್ಫರಾಜ್ ನವಾಜ್ ಹತ್ಯೆ ಬೆದರಿಕೆ ಎದುರಿಸುತ್ತಿರುವ ವಿಜ್ಞಾನಿಗಳ ಹೆಸರು ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಗಾಗಿ ಕ್ರಮವಾಗಿ ವಿಜ್ಞಾನಿಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇತ್ತೀಚೆಗೆ ಭಾರತ ಬಾಂಗ್ಲಾದೇಶದಲ್ಲಿ ಸೆರೆಸಿಕ್ಕ ಟಿ ನಜೀರ್ ಕೂಡ ಇದನ್ನು ಸ್ಪಷ್ಟಪಡಿಸಿದ್ದಾನೆ.
ಬೆಂಗಳೂರು ಸ್ಫೋಟದಲ್ಲಿ ಈ ಇಬ್ಬರು ಉಗ್ರರೂ ಭಾಗಿಗಳಾಗಿದ್ದರು. 2008ರ ಬೆಂಗಳೂರು ಸ್ಫೋಟದಲ್ಲಿ ನೇರವಾಗಿ ಪಾಲ್ಗೊಂಡಿದ್ದ ನಜೀರ್ ಇತರ ಸ್ಫೋಟಗಳಿಗೆ ಸುಧಾರಿತ ಸಾಧನಗಳನ್ನು ಇಂಡಿಯನ್ ಮುಜಾಹೀದಿನ್ ಪೂರೈಸಿದ ಅಪಾದನೆ ಎದುರಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಮುಂಬೈ ಕೇಂದ್ರ ಹಾಗೂ ಬಾಬಾ ಬಾಲಿವುಡ್ ಸ್ಟುಡಿಯೋಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕರಾವಳಿಯಲ್ಲೂ ಭದ್ರತೆ ಬಲಪಡಿಸಲಾಗಿದೆ.












Click it and Unblock the Notifications