ಹೋಬಳಿಗೊಂದು ಹೋಮಿಯೋಪತಿ ಆಸ್ಪತ್ರೆ

ಹೋಬಳಿಗೊಂದು ಹೋಮಿಯೋಪತಿ ಆಸ್ಪತ್ರೆ ಸ್ಥಾಪಿಸುವಷ್ಟು ಸಂಖ್ಯೆಯಲ್ಲಿ ಯೋಮಿಯೋಪತಿ ವೈದ್ಯರುಗಳು ಇರುವುದರಿಂದ ಗ್ರಾಮೀಣ ಜನರಿಗೆ ಹೋಮಿಯೋಪತಿ ಚಿಕಿತ್ಸೆ ದೊರಕುವಂತಾಗಬೇಕು. ಈ ದೃಷ್ಟಿಯಿಂದ ಹೋಬಳಿಗೊಂದು ಚಿಕಿತ್ಸಾಲಯವನ್ನು ಸ್ಥಾಪಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಮಾಜಕ್ಕೆ ಆರೋಗ್ಯವಂತ ಜನಾಂಗವನ್ನು ನೀಡುವಲ್ಲಿ ಹೋಮಿಯೋಪತಿ ವೈದ್ಯಕೀಯ ಪದ್ಧತಿಯಿಂದ ಸಾಧ್ಯವಿದೆ. ಹೋಮಿಯೋಪತಿ ವೈದ್ಯಕೀಯ ಸೀಟುಗಳನ್ನು 40 ರಿಂದ 100 ಸೀಟುಗಳಿಗೆ ಏರಿಸಲಾಗುವುದಲ್ಲದೆ ಸರ್ಕಾರದ ಅನುದಾನದಲ್ಲೆ 100 ಮಂದಿ ಹೋಮಿಯೋಪತಿ ವೈದ್ಯರನ್ನು ಸಮಾಜಕ್ಕೆ ನೀಡಲಾಗುವುದೆಂದರು.
ಒಂದು ಸಾವಿರ ಬಿಲಿಯನ್ ಡಾಲರ್ ಹಣವನ್ನು ವೈದ್ಯಕೀಯ ಔಷಧಿಗಳ ತಯಾರಿಕೆಗೆ ಖರ್ಚುಮಾಡಲಾಗುತ್ತಿದ್ದರೆ. ಅವರಲ್ಲಿ ಶೇ 1 ರಷ್ಟು ಮಾತ್ರ ಹೋಮಿಯೋಪತಿ ಔಷಧಿಗಳ ತಯಾರಿಕೆಗೆ ಖರ್ಚು ಮಾಡಲಾಗುತ್ತಿದೆ. ಯಾವುದೇ ಅಡ್ಡ ಪರಿಣಾಮ ಇಲ್ಲದ ಈ ಔಷಧಿಗಳನ್ನು ಬಳಸುವಂತೆ ಜನರಿಗೆ ಪ್ರೇರಣೆ ನೀಡಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ ಸಾರ್ವಜನಿಕರಿಗೆ ಹೋಮಿಯೋಪತಿ ಚಿಕಿತ್ಸೆ ಬಗ್ಗೆ ಮಾಹಿತಿಯ ಕೊರತೆ ಇದೆ. ಅಲ್ಲದೆ ಈ ವೈದ್ಯಕೀಯ ಚಿಕಿತ್ಸೆಯಲ್ಲಿ ಜನರಿಗೆ ವಿಶ್ವಾಸ ಮೂಡಿಸುವುದು ಹೇಗೆ ಎಂಬುದರ ಬಗ್ಗೆ ಚಿಂತನೆ ನಡೆಯಬೇಕಿದೆ ಎಂದರು. ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಹೋಮಿಯೋಪತಿ ಕ್ಷೇತ್ರದಲ್ಲಿ ಸಂಶೋಧನೆಗೆ ಪ್ರೋತ್ಸಾಹ ದೊರಕುವಂತೆ ಮಾಡಿ ಅದರ ಫಲಿತಾಂಶವನ್ನು ಸಾರ್ವಜನಿಕರಿಗೆ ತಿಳಿಸಿ ಹೋಮಿಯೋಪತಿ ವೈದ್ಯಕೀಯ ಔಷಧಿಗಳ ಮೇಲೆ ನಂಬಿಕೆ ಬರುವಂತೆ ಮಾಡಬೇಕು ಎಂದರು.
ಖ್ಯಾತ ಹೋಮಿಯೋಪತಿ ವೈದ್ಯರಾದ ಡಾ ಬಿ.ಟಿ. ರುದ್ರೇಶ್ ಅವರು ಹೋಮಿಯೋಪತಿ ಔಷಧಿಗಳ ಪರಿಣಾಮಗಳ ಬಗ್ಗೆ ವಿವರಿಸುತ್ತಾ ಹೋಮಿಯೋಪತಿ ತಂತ್ರಜ್ಞಾನದಿಂದ ದೂರವಾಗಿರುವ ಗ್ರಾಮೀಣ ಜನರಿಗೆ ಹೋಮಿಯೋಪತಿ ವೈದ್ಯಕೀಯ ಚಿಕಿತ್ಸೆ ದೊರಕುವಂತಾಗಬೇಕು ಎಂದರು.











Click it and Unblock the Notifications