ಅನಂತಮೂರ್ತಿಯವರ ಕೊನೆಯಾಸೆಯಿದು...

ನಗರದ ಸೆಂಟ್ರಲ್ ಕಾಲೇಜಿನಲ್ಲಿ ಅಭಿನವ ಹಾಗೂ ಕ್ಯಾಲಿಫೋರ್ನಿಯಾದ ಸಾಹಿತ್ಯಾಂಜಲಿ ಜೊತೆಯಾಗಿ ಅನಂತಮೂರ್ತಿ 77 ರ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಅನಂತಮೂರ್ತಿಯವರ ಕಾಲಮಾನ ವಿಮರ್ಶಾ ಸಂಕಲನ, ನಾಗ ಐತಾಳ ಸಂಪಾದಿಸಿದ ಅನಂತಮುಖದ ಮೂರ್ತಿ ಪುಸ್ತಕ ಬಿಡುಗಡೆ ಹಾಗೂ ವೆಬ್ ಸೈಟ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಅಭಿವೃದ್ಧಿ ಎಂಬುದು ವಿಷಶಬ್ದ. ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ನಾಶವಾಗುತ್ತಿದೆ. ರೈತರು, ಕುಶಲಕರ್ಮಿಗಳು ತಮ್ಮದೇ ಆದ ರೀತಿಯಲ್ಲಿ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಆದರೆ, ರಾಜಕೀಯ ಪಕ್ಷಗಳು ಬಳಸುವ ಅಭಿವೃದ್ಧಿ ಶಬ್ಧದ ಬಗ್ಗೆ ವಿಮರ್ಶೆ ಆರಂಭವಾಗಬೇಕು. ಹಸಿವು, ಬಡತನ ಅಭಿವೃದ್ಧಿ ಮೂರು ಬೇರೆ ಬೇರೆ. ಅದು ಅರ್ಥ ಆಗಬೇಕು ಎಂದು ಜ್ಞಾನಪೀಠ ಪುರಷ್ಕೃತ ಸಾಹಿತಿ ಡಾ ಯು ಆರ್ ಆನಂತಮೂರ್ತಿ ಪ್ರತಿಪಾದಿಸಿದರು.
ನೆಲ ಮತ್ತ ಜಲಕ್ಕೆ ವಿಷ ಹಾಕುವವರನ್ನು ಬಹಿಷ್ಕರಿಸಿ. ಕನ್ನಡ ಭಾಷೆ ಉಳಿಯಬೇಕಾದರೆ ಎಲ್ಲ ಮಕ್ಕಳೂ ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಬೇಕು. ಏಕ ರೀತಿ ಶಾಲೆ, ಸಮಾನ ಶಿಕ್ಷಣ ಎಲ್ಲರಿಗೂ ದೊರೆಯಬೇಕು. ಇದು ನನ್ನ ಕೊನೆಗಾಲದ ಆಸೆ ಎಂದು ಅನಂತಮೂರ್ತಿ ಹೇಳಿದರು. ರಾಜ್ಯದ ಎಲ್ಲ ವಿವಿಗಳ ಕನ್ನಡ ವಿಭಾಗಗಳತ್ತ ವಿಶೇಷವಾಗಿ ಗಮನ ಹರಿಸಬೇಕಾದಂಥ ಅನಿವಾರ್ಯ ಸ್ಥಿತಿ ಬಂದೊದಗಿದೆ. ಅದರಲ್ಲೂ ಬೆಂಗಳೂರು ವಿವಿಯ ಕನ್ನಡ ವಿಭಾಗ ಅಧೋಗತಿಗಿಳಿದಿದೆ. ಈ ವಿಷಯವಾಗಿ ನಾವಿಬ್ಬರೂ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸೋಣ ಎಂಗು ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಅವರನ್ನು ಅನಂತಮೂರ್ತಿ ಬಹಿರಂಗವಾಗಿ ವಿನಂತಿಸಿಕೊಂಡರು.











Click it and Unblock the Notifications