ಅರುಣ ಶಾನಭಾಗಳಿಗೆ ದಯಾಮರಣ ನೀಡಬೇಕಾ?

ಮೂವತ್ತಾರು ವರ್ಷದ ಹಿಂದೆ ಅರುಣ ಎಂಬಾಕೆ ಮುಂಬೈನ ಒಂದು ಸರಕಾರಿ ಆಸ್ಪತ್ರೆಯಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದರು. ಒಂದು ದಿನ ಅದೇ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದ ಒಬ್ಬ ಕಸಗುಡಿಸುವವ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆ ಕ್ಷಣದಿಂದ ಅರುಣಳ ಬದುಕೇ ಬದಲಾಯಿತು. ಆವತ್ತಿನಿಂದ ಇವತ್ತಿನವರೆವಿಗೂ ಆಕೆ ಅದೇ ಆಸ್ಪತ್ರೆಯಲ್ಲಿ ಬದುಕಿಲ್ಲ, ಸಾವಿಲ್ಲ ಎಂಬಂತಹ ಸ್ಥಿತಿಯಲ್ಲಿ ರೋಗಿಯಾಗಿ ಜೀವಚ್ಛವವಾಗಿದ್ದಾಳೆ.
ಅರುಣಳಿಗೆ ಮಾತನಾಡುವುದಕ್ಕೆ ಬರುತ್ತಿಲ್ಲ. ಕಣ್ಣು ಕಾಣಿಸುವುದಿಲ್ಲ, ಕಿವಿ ಕೇಳಿಸುವುದಿಲ್ಲ. ಆಕೆಗೆ ವೈದ್ಯರು ಬಲವಂತವಾಗಿ ಪ್ರತಿದಿನ ಏನಾದರೂ ತಿನ್ನಿಸಬೇಕು. ವೈದ್ಯರ ಪ್ರಕಾರ ಆಕೆಯ ಮಿದುಳು ಸತ್ತುಹೋಗಿದೆ. ಚೇತರಿಸಿಕೊಳ್ಳುವ ಯಾವ ಲಕ್ಷಣಗಳೂ ಇಲ್ಲ.
ಈ ಮಧ್ಯೆ ಪಿಂಕಿ ವಿಕ್ರಾನಿ ಎಂಬ ಸಾಮಾಜಿಕ ಕಾರ್ಯಕರ್ತೆ ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸಿ ಅರುಣಳನ್ನು ಬಲವಂತದಿಂದ ಜೀವಂತವಾಗಿಡುವ ಪ್ರಯತ್ನವನ್ನು ಕೈಬಿಡಬೇಕೆಂದು ಕೇಳಿಕೊಂಡಿದ್ದಾರೆ. ಅವಳಿಗೆ ಆಹಾರ ಕೊಡಕೂಡದು ಎನ್ನುವುದು ಪಿಂಕಿಯ ಮನವಿ. ಆಹಾರ ಕೊಡುವುದನ್ನು ನಿಲ್ಲಿಸಿದ ಕ್ಷಣ ಅರುಣ ಸತ್ತೇ ಹೋಗುತ್ತಾಳೆ ಎಂದು ವೈದ್ಯರು ಹೇಳುತ್ತಾರೆ. 60 ವರ್ಷ ವಯಸ್ಸಿನ ಅರುಣಳಿಗೆ ಯಾರೂ ದಿಕ್ಕಿಲ್ಲ. ಅವರ ಕುಟುಂಬದವರು ಎನಿಸಿಕೊಂಡವರು ಅವಳನ್ನು ಕೈಬಿಟ್ಟು ವರ್ಷಗಳೇ ಉರುಳಿವೆ.
ರಾಜಕೀಯ ಮತ್ತು ಧಾರ್ಮಿಕ ಉದ್ದೇಶದ ಉಪವಾಸಕ್ಕೆ ಅನುಮತಿ ಕೊಡಬಹುದು. ಆದರೆ, ಬದುಕಿದ್ದೂ ಸತ್ತಂತಿರುವ ಅರುಣಳಂಥವರಿಗೆ ಇಂಥ ಉಪವಾಸದ ಜೀವನ ಅಗತ್ಯವಿಲ್ಲ ಎನ್ನುವುದು ಪಿಂಕಿ ವಿಕ್ರಾನಿ ಅವರ ವಾದ. ಅಂದರೆ, ದಯಾಮರಣ ಇಲ್ಲಿ ಅನ್ವಯವಾಗಬೇಕಾ? ಅಥವಾ, ಬದುಕಿರಲಿ ಎಂಬ ಏಕೈಕ ಉದ್ದೇಶದಿಂದ ಅವಳಿಗೆ ಆಹಾರ ತುರುಕಿ ಜೀವಂತ ಇಡಬೇಕಾ ಎನ್ನುವುದು ಪ್ರಶ್ನೆ.
ನಿಮ್ಮ ಅಭಿಪ್ರಾಯವನ್ನು ಈ ಜನಾಭಿಪ್ರಾಯ ಮತಗಟ್ಟೆಯಲ್ಲಿ ದಾಖಲಿಸಿ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications