Get Updates
Get notified of breaking news, exclusive insights, and must-see stories!

ಗೋಹತ್ಯೆ ವಿಧೇಯಕ ಮಂಡನೆ ಸಿದ್ಧ

Malenadu Gidda, Indian cattle breed
ಬೆಂಗಳೂರು, ಡಿ. 13 : ಡಿಸೆಂಬರ್ 14 ರಿಂದ ಆರಂಭವಾಗಲಿರುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ. 1964ರ ಕಾಯ್ದೆಯಲ್ಲಿನ ಲೋಪಗಳನ್ನು ಸರಿಪಡಿಸಿ ಕರಡು ವಿಧೇಯಕ ಸಿದ್ಧಗೊಳಿಸಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಮತ್ತು ಗೋ ಸೇವಾ ಆಯೋಗ ರಚನೆಗೂ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸದ್ಯ ಜಾರಿಯಲ್ಲಿರುವ ಕಾನೂನಿನಡಿ 12 ವರ್ಷ ಮೀರಿದ ಬಂಜೆ ಮತ್ತು ಅನುಪಯುಕ್ತ ರಾಸುಗಳ ಹತ್ಯೆ ಮತ್ತು ಮಾಂಸ ಮಾರಾಟಕ್ಕೆ ಅವಕಾಶವಿತ್ತು. ನಿಯಮ ಉಲ್ಲಂಘನೆಗೆ ಗರಿಷ್ಠ ಒಂದು ಸಾವಿರ ರುಪಾಯಿ ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಆದರೆ, ಈ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಆರೋಗ್ಯವಂತ ರಾಸುಗಳಿಲ್ಲದೆ, ಎಳೆಯ ಕರುಗಳನ್ನು ರಾಜಾರೋಷವಾಗಿ ಹತ್ಯೆ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಭಾರಿ ಸಂಖ್ಯೆಯ ಜಾನುವಾರುಗಳು ನೆರೆ ರಾಜ್ಯಗಳ ಕಸಾಯಿಖಾನೆ ಪಾಲಾಗುತ್ತಿವೆ.

ಪ್ರಸ್ತಾವಿತ ವಿಧೇಯಕದಲ್ಲಿ ಗೋಹತ್ಯೆ ಕಸಾಯಿಖಾನೆಗೆ ಜಾನುವಾರು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕಾನೂನು ಉಲ್ಲಂಘನೆ ಶಿಕ್ಷಾರ್ಹ ಮಾತ್ರವಲ್ಲ ಜಾಮಿನು ರಹಿತ ಅಪರಾಧ. ಆರೋಪ ಸಾಬೀತಾದರೆ, ಕನಿಷ್ಠ ಒಂದು ವರ್ಷದಿಂದ ಏಳು ವರ್ಷ ಜೈಲು, ಇದಲ್ಲದೆ, 25 ಸಾವಿರ ರುಪಾಯಿದಿಂದ ಗರಿಷ್ಠ ಒಂದು ಲಕ್ಷ ರುಪಾಯಿ ದಂಡ. ಅಪರಾಧ ಪ್ರಮಾಣ ಆಧರಿಸಿ ಎರಡನ್ನೂ ವಿಧಿಸಬಹುದು. ಎರಡನೇ ಬಾರಿ ಅಪರಾಧ ಸಾಬೀತಾದರೆ ಶಿಕ್ಷೆ ಮತ್ತು ದಂಡ ದುಪ್ಪಟ್ಟಾಗಲಿದೆ. ವಾರೆಂಟ್ ಇಲ್ಲದೆ ಆರೋಪಿಗಳನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿಬಹುದು.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+