ಬೊಮ್ಮನಹಳ್ಳಿ : ಡಿ.12 ಉಚಿತ ಆರೋಗ್ಯ ಶಿಬಿರ
ಬೆಂಗಳೂರು,
ಡಿ. 11 : ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ ಸತೀಶ್ ರೆಡ್ಡಿ ಅವರ 38 ನೇ ಹುಟ್ಟುಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಡಿ 12 ರಂದು ಬೇಗೋರು ಮುಖ್ಯರಸ್ತೆಯಲ್ಲಿರುವ ಹೊಂಗಸಂದ್ರದ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಲಾಗಿದೆ. id="toptextpromo">ಕರ್ನಾಟಕ
ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಪುರಷ್ಕೃತ ಡಾ. ಜಾನ್ ಎಬನೇಜರ್ ಹಾಗೂ ಪರಿಮಳ ಹೆಲ್ತ್ ಸರ್ವೀಸಸ್ ಸಹಯೋಗದಲ್ಲಿ ಉಚಿತ ಆರೋಗ್ಯ ಚಿಕಿತ್ಸೆ ಹಾಗೂ ರಕ್ತದಾರ ಶಿಬಿರ ನಡೆಯಲಿದೆ. ಇದರ ಜೊತೆಗೆ ಸ್ತ್ರಿಶಕ್ತಿ ಸಂಘಗಳಿಗೆ ಟೈಲರಿಂಗ್ ಮಷಿನ್ ಗಳ ವಿತರಣೆ, ಅಂಗವಿಕಲರಿಗೆ ಟ್ರೈಸಿಕಲ್ ಹಾಗೂ ಇತರೆ ಸಾಮಗ್ರಿಗಳ ವಿತರಣೆ ಕಾರ್ಯಕ್ರಮವನ್ನು ಶಾಸಕ ಸತೀಶ್ ರೆಡ್ಡಿ ನಡೆಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, ನವೀನಗೌಡ-9916687143, 9535186352 id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications