ಬಳ್ಳಾರಿ ಬಿಟ್ಟು ಕದಲದಂತೆ ರೆಡ್ಡಿಗೆ ಸಿಬಿಐ ಸೂಚನೆ

ಕಂಪನಿಯ ವಿರುದ್ಧ ಗಂಭೀರ ಆರೋಪಗಳಿರುವ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವರೆಗೆ ಬಳ್ಳಾರಿಯಿಂದ ಹೊರಹೋಗದಂತೆ ರೆಡ್ಡಿ ಅವರಿಗೆ ತನಿಖಾ ತಂಡ ಸೂಚನೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂನಲ್ಲಿ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಅಲ್ಲಿನ ಸರಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೇಂದ್ರವನ್ನು ಕೋರಿತ್ತು. ಇತ್ತೀಚೆಗೆ ಕೇಂದ್ರ ಈ ಪ್ರಕರಣನ್ನು ಸಿಬಿಐ ತನಿಖೆಗೆ ವಹಿಸಿತ್ತು.
ಬಳ್ಳಾರಿ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವ ವಿವಾದಿತ ಓಎಂಸಿ ಕರ್ನಾಟಕ, ಅಂಧ್ರಪ್ರದೇಶ ನಡುವಿನ ಗಡಿ ಗುರುತುಗಳನ್ನು ನಾಶ ಮಾಡಿದೆ ಎಂದು ಆಂಧ್ರ ಸರಕಾರ ಒಪ್ಪಿಕೊಂಡಿದೆ. ಇಧರ ತನಿಖೆಗಾಗಿ ಅಲ್ಲಿನ ಸರಕಾರ ನೇಮಿಸಿದ್ದ ಉನ್ನತ ಮಟ್ಟದ ತ್ರಿಸದಸ್ಯ ಸಮಿತಿ, ಓಎಂಸಿ ಕರ್ನಾಟಕದ ಗಡಿ ಭಾಗವನ್ನು ಒತ್ತುವರಿ ಮಾಡಿದೆ ಎಂಬ ಅಭಿಪ್ರಾಯವನ್ನು ದಾಖಲಿಸಿದೆ. ಆಂಧ್ರಪ್ರದೇಶದ ವಿಶೇಷ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ ಸಾಮಿ ರೆಡ್ಡಿ, ಹೆಚ್ಚುವರಿ ಅರಣ್ಯ ಅಧಿಕಾರಿಗಳಾದ ಓಂಕಾರ್ ಸಿಂಗ್ ಮತ್ತು ಎಸ್ ಬಿ ಎಲ್ ಮಿಶ್ರಾ ಅವರನ್ನು ಒಳಗೊಂಡ ಸಮಿತಿ ಇತ್ತೀಚೆಗೆ ಸರಕಾರಕ್ಕೆ ನೀಡಿದ ವರದಿಯಲ್ಲಿ ಈ ಅಂಶ ಅಡಕವಾಗಿದೆ ಎಂದು ಹೇಳಲಾಗಿದೆ.
(ಏಜನ್ಸೀಸ್)












Click it and Unblock the Notifications