ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲವ್ ಮಾಡು ಪರಾರಿಯಾಗು

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Minor Lover Rameshwar
ರಾಮನಗರ,ಡಿ.9 : ಕಳೆದ ಮೂರು ವಾರಗಳಿಂದೀಚಿಗೆ ರಾಮನಗರ ಜಿಲ್ಲೆ ಬಿಡದಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳ ಮೂರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದರಿಂದ ಪೋಷಕರುಗಳಲ್ಲಿ ಆತಂಕ ಮನೆಮಾಡಿತ್ತು ಜತೆಗೆ ಪೋಲೀಸರಿಗೂ ತಲೆನೋವಾಗಿತ್ತು.

ಟೀನೇಜಿನ ವಯಸ್ಸು ಹುಚ್ಚುಕೋಡಿಯ ಮನಸ್ಸು ಎಂಬಂತೆ ನಾಪತ್ತೆಯಾದವರೆಲ್ಲ 18 ತುಂಬದ ಹುಡುಗಿಯರು ಪ್ರೀತಿಯ ಬಲೆಗೆ ಬಿದ್ದು ಪ್ರೇಮಪಲಾಯನ ಮಾಡಿರುವ ಹಲವು ಘಟನೆಗಳು ಖಚಿತವಾಗಿದೆ. ಅದರಲ್ಲಿ ಸಾಕಷ್ಟು ಕುತೂಹಲವನ್ನುಂಟು ಮಾಡಿದ್ದ ಮಾರುತಿ ನಗರದ 7ನೇ ತರಗತಿ ವಿದ್ಯಾರ್ಥಿನಿ ಸೋನು( ಹೆಸರು ಬದಲಿಸಲಾಗಿದೆ)ನಾಪತ್ತೆ ಪ್ರಕರಣ ಪತ್ತೆಯಾಗಿದೆ.

ಮಾರ್ವಾಡಿಗಳ ಮಗಳಾದ ಸೋನು 13ನೇ ವಯಸ್ಸಿನಲ್ಲೇ ಮನೆಯ ಪಕ್ಕದಲ್ಲಿದ್ದ ಉತ್ತರಪ್ರದೇಶ ಮೂಲದ ರಾಮೇಶ್ವರ್‌ನೊಂದಿಗೆ ಲಖನೌಗೆ ಪ್ರೇಮ ಪಲಾಯನ ಮಾಡಿ ಸಿಕ್ಕಿಬಿದ್ದಿದ್ದಾಳೆ. ಆಡಿನಲಿದು ಓದುವ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಪಾಶಕ್ಕೆ ಬಿದ್ದು ಹೆತ್ತು ಹೊತ್ತು ಬೆಳೆಸಿದ ಪೋಷಕರುಗಳಿಗೆ ಕೈಕೊಟ್ಟು ಪ್ರೇಮ ಪಲಾಯನ ಮಾಡುತ್ತಿರುವ ಪ್ರಕರಣಗಳು ಈ ಭಾಗದ ತಂದೆ ತಾಯಿಯರನ್ನು ಆತಂಕಕ್ಕೆ ಈಡುಮಾಡಿದೆ.

ಬಾರೀ ಘನಂದಾರಿ ಕಾರ್ಯ ಮಾಡಿರುವವನ ರೀತಿ ಪೋಲೀಸರೊಂದಿಗೆ ನಗುನಗುತಾ ಹೆಜ್ಜೆಹಾಕುತ್ತ ನಡೆದು ಬಂದ ಉತ್ತರ ಪ್ರದೇಶದ ಲಖನೌ ಮೂಲಕ 20ರ ಪ್ರಾಯದ ರಾಮೇಶ್ವರನ ಮುಖದಲ್ಲಿ ತಪ್ಪು ಮಾಡಿರುವ ಭಾವನೆ ಇರಲೇ ಇಲ್ಲ. ಬಿಡದಿಯ ಗ್ರಾನೈಟ್ ಪ್ಯಾಕ್ಟರಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವಾಗಲೇ 7ನೇ ತರಗತಿಯ ಸೇಟು ಚೋಕ್ರಿ (ಹುಡುಗಿ)ಸೋನುವನ್ನ ಪ್ರೀತಿಯ ಗಾಳಕ್ಕೆ ಸಿಲುಕಿಸಿಕೊಂಡಿದ್ದಾನೆ.

ಸೋನು 5 ನೇ ತರಗತಿ ಓದುತ್ತಿರುವಾಗಲೇ ಪ್ರೀತಿ ಪ್ರೇಮದಾಟವಾಡುತ್ತಿದ್ದರು. 7ನೇ ತರಗತಿ ಪೂರೈಸುತ್ತಿದ್ದಂತೆ ಸೋನುವನ್ನ ವಿವಾಹವಾಗಲು ದೂರದ ಲಖನೌಗೆ ಪರಾರಿಯಾದ ರಾಮೇಶ್ವರ ಪೋಲೀಸರ ಅತಿಥಿಯಾಗಿದ್ದಾನೆ. ರಾಜಾಸ್ಥಾನ, ಉ.ಪ್ರದೇಶದಲ್ಲಿ 15 ವರ್ಷದ ಯುವಕ ಯುವತಿಯರು ಮದ್ವೆ ಆಗ್ತಾರೆ. ಆ ಲೆಕ್ಕದಲ್ಲಿ ಸೋನು ಕೂಡ ಚಿಕ್ಕವಳಲ್ಲ, ಮದುವೆಗೆ ಅಪ್ಪ ಅಮ್ಮ ಒಪ್ಪಲ್ಲ ಹೋಗೋಣ ಎಂದು ಸೋನುವೇ ಹೇಳಿದ್ದರಿಂದ ಪ್ರೇಮಪಲಾಯನ ಮಾಡಿದೆವೆಂದು ರಾಮೇಶ್ವರ್ ಯಾವುದೇ ಅಳುಕಿಲ್ಲದೇ ಪೋಲೀಸರ ಮತ್ತು ಮಾಧ್ಯಮದವರೇ ಎದುರೇ ಹೇಳಿದ.

ಇಂಥ ಕೇಸುಗಳು ಒಂದೆರಡಲ್ಲ. ಕಳೆದ ಮೂರು ವಾರಗಳಂದೀಚೆಗೆ ರಾಮನಗರದ ಬಿಡದಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲಾ ಕಾಲೇಜಿಗೆ ಹೋದ 18 ತುಂಬದ ವಿದ್ಯಾರ್ಥಿನಿಯರು ನಾಪತ್ತೆಯಾದ್ದರಿಂದ ಪೋಷಕರಲ್ಲಿ ಆತಂಕ ಮನೆಮಾಡಿದ್ದರೆ, ಪೋಲೀಸರಿಗೆ ತಲೆನೋವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನ ಬೆನ್ನತ್ತಿದ್ದ ಪೋಲೀಸರು 13 ರ ಬಾಲೆ ಸೋನುವಿಳ ಪ್ರಕರಣ ಹಲವು ತಿರುವು ಪಡೆದುಕೊಂಡಿತ್ತು.

ಸೋನುವಿಳೊಂದಿಗೆ ನಾಪತ್ತೆಯಾಗಿದ್ದ ಪಕ್ಕದ ಮನೆಯ ರಾಮೇಶ್ವರ್ ಮೊಬೈಲ್ ಕರೆಯ ಜಾಡುಹಿಡಿದು ತನಿಖೆ ನಡೆಸಿದಾಗ ಆಂಧ್ರದ ವಿಜಯವಾಡದ ಮೂಲಕ ಉತ್ತರ ಪ್ರದೇಶದ ಲಖನೌಗೆ ಪಲಾಯನ ಮಾಡಿದ್ದರು. ಈ ಚೋಕ್ರಿ ಪ್ರೇಮಿಗಳನ್ನ ಪೋಲೀಸರು ವಶಕ್ಕೆ ತೆಗೆದುಕೊಳ್ಳುವಲ್ಲಿ ಪಡಬಾರದ ಪಾಟಲುಪಟ್ಟಿದ್ದರು.

ಮಕ್ಕಳ ಚಟುವಟಿಕೆ, ಮುಖ್ಯವಾಗಿ ಮೊಬೈಲ್ ಕರೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದಲ್ಲಿ ಮಕ್ಕಳು ದಾರಿ ತಪ್ಪಲು ಅವಕಾಶವಿರದಂತಾಗುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು, ಪ್ರೀತಿ, ಪ್ರೇಮ ಸಿನೆಮಾಗಳ ಗುಂಗಿಗೆ ಒಳಗಾದರೆ ತಮ್ಮ ಭವಿಷ್ಯಕ್ಕೆ ತಂದುಕೊಳ್ಳುತ್ತಾರೆಂಬುದಕ್ಕೆ ಈ ಹದಿಹರೆಯದ ಪ್ರಕರಣವೇ ಸಾಕ್ಷಿಯಾಗಿದೆ ಎಂದು ಸಿಪಿಐ ಧರ್ಮೇಂದ್ರ ಮತ್ತು ಬಿಡದಿ ಪಿ.ಎಸ್.ಐ ಸತ್ಯನಾರಾಯಣ ಹೇಳಿದರು.

ಹುಚ್ಚುಕೋಡಿಯ ಮನಸ್ಸಿನ ಸೋನುವಿನ ಹುಂಬ ಮನಸ್ಸಿನ ಗೆಳೆಯ ರಾಮೇಶ್ವರ ಪ್ರೇಮ ಪರಾರಿ ಮಾಡಿದ್ದಕ್ಕಾಗಿ ಅತ್ಯಾಚಾರ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡು ಜೈಲು ಸೇರಿದ್ದಾನೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಜಾಮೀನು ಸಿಗಲು 15 ತಿಂಗಳ ಕಾಲವಾದರೂ ಬೇಕಾಗುತ್ತದೆ, ಅಷ್ಟು ಸುಲಭವಾಗಿ ರಾಮೇಶ್ವರನಿಗೆ ಜಾಮೀನು ಸಿಗುವುದಿಲ್ಲವೆಂಬುದು ಪೋಲೀಸರು ಹೇಳಿದರು.

ತಾನು ಮಾಡಿದ್ದೆಲ್ಲ ತಪ್ಪು ಎಂದು ಒಪ್ಪಿಕೊಳ್ಳುವ ಸೋನು ಅಪ್ಪ ಅಮ್ಮನ ಜತೆಯಲ್ಲಿ ಇರುತ್ತೇನೆಂದು ಗೆಳೆಯನಿಗೆ ಗುಡ್‌ಬೈಹೇಳಿ ಮನೆಗೆ ಸೇರಿಕೊಂಡಿದ್ದಾಳೆ. ಒಟ್ಟಾರೆ ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಗುಂಗಿಗೆ ಬಿದ್ದಿದ್ದ ಪ್ರಕರಣಕ್ಕೆ ಪೋಲೀಸರು ತೆರೆಎಳೆದಿದ್ದಾರೆ. ಒಟ್ಟಾರೆ ಇಂತಹ ಪ್ರಕರಣಗಳು ಸಮಾಜದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆಯಿಂದ ಗಮನಹರಿಸಬೇಕಾಗಿದೆ ಮತ್ತು ಪೋಷಕರಿಟ್ಟಿರುವ ಪ್ರೀತಿ, ವಿಶ್ವಾಸ, ನಂಬಿಕೆಗೆ ಮಕ್ಕಳು ಕೂಡ ಅರ್ಹರಾಗಬೇಕು ಎಂಬುದು ಪೋಲೀಸರ ಅಭಿಪ್ರಾಯವಾಗಿದೆ.

ಐಸ್ ಕ್ರೀಂ : Heart change madbedi SIMCARD thara; preeti LOW madbedri BATTERY thara, nenapu kadime madbedi BALANCE thara, dina nan nenapirali CHARGER thara, OKna?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X