ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇ-ಆಡಳಿತಕ್ಕೆ ಯಡಿಯೂರಪ್ಪ ಸಿಎಂ ಚಾಲನೆ
ಕೇಸ್ವಾನ್ಗೆ ಚಾಲನೆ ನೀಡಿದ ನಂತರ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದ ಸುಮಾರು 2300 ಕಚೇರಿಗಳಿಗೆ ಕೇಸ್ವಾನ್ ವಿದ್ಯುನ್ಮಾನ ಸಂಪರ್ಕ ಲಭ್ಯವಾಗಲಿದೆ ಎಂದರು. ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆಯಿಂದ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಸಾಧ್ಯ. ಸರಕಾರ ಇ-ಆಡಳಿತ ಮುಖಾಂತರ ಕೇಸ್ವಾನ್ ಜಾಲವನ್ನು ಅಭಿವೃದ್ಧಿಗೊಳಿಸುತ್ತಿದೆ. ದೇಶದಲ್ಲಿ ಮೊದಲ ಬಾರಿಗೆ ಕ್ರಾಂತಿಕಾರಕ ಹೆಜ್ಜೆ ಇಡುವ ಮೂಲಕ ಹೊಸ ಯೋಜನೆ ರೂಪಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ಮಾಹಿತಿ ಹೆದ್ದಾರಿಯೊಂದನ್ನು ಸೃಷ್ಠಿಸುವಲ್ಲಿ ರಾಜ್ಯ ಸರ್ಕಾರ ಇ-ಆಡಳಿತ ಕೇಂದ್ರವು ಕೇಸ್ವಾನ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯು ಧ್ವನಿ ಮತ್ತು ದೃಶ್ಯ ಸೇವೆಗಳೊಂದಿಗೆ ಕುಳಿತಲ್ಲಿಯೇ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, December 8, 2009, 17:44 [IST]