ನೇರ ದಿಟ್ಟ ನಿರಂತರ ಶೋಭಾ ಕರಂದ್ಲಾಜೆ

ಮಂಗಳೂರು ಬೆಂಗಳೂರು ಶೈಲಿ ಕಸಿಮಾಡಿದ ಕನ್ನಡ. ಉಚ್ಛಾರಣೆ ಸ್ಪಷ್ಟ. ಧ್ವನಿಯ ಏರಿಳಿತ ಸರಾಗ. ಕಂಚಿನ ಕಂಠ. ದಿಟ್ಟ ನಿರಂತರ ವಾಹಿನಿಯಲ್ಲಿ ನೇರ ಪ್ರಶ್ನೆಗೆ ನೇರ ಉತ್ತರ, ಜಾರಿಕೆ ಹಾರಿಕೆಯ ಉತ್ತರಗಳು ಕಡಿಮೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಪಳಗಿದ ಲಕ್ಷಣಗಳು ಢಾಳವಾಗಿ ಗೋಚರ. ಮಾತನಾಡುವಾಗ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ, ವಿ ಎಸ್ ಆಚಾರ್ಯ ಮುಂತಾದವರಂತೆ ತಡವರಿಸುವುದು ಆ ಊ ಏ ಓ ಎನ್ನುವ ಶಬ್ದಗಳಿಲ್ಲ.
ಕನ್ನಡ ನಾಡಿನ ರಾಜಕೀಯ ಅಂಗಳದಲ್ಲಿ ಅನೇಕ ಮಹಿಳಾಮಣಿಯರು ರಂಗೋಲಿ ಹಾಕಿ ಹೋಗಿದ್ದಾರೆ. ಆದರೆ, ಶೋಭಾ ವಾಗ್ಝರಿಗೆ ಅವರ್ಯಾರೂ ಸಾಟಿಯಿಲ್ಲ. ನಾಗರತ್ನಮ್ಮ, ತೇಜಸ್ವಿನಿ, ಪ್ರಮೀಳಾ ನೇಸರ್ಗಿ, ರಾಣಿ ಸತೀಶ್, ನಾಗಮ್ಮ ಕೇಶವಮೂರ್ತಿ, ಮೋಟಮ್ಮ, ಬಿಟಿ ಲಲಿತಾನಾಯಕ್, ವಿಮಲಗೌಡ ಇವರೆಲ್ಲರಿಗಿಂತ ಮುಂದೆ..ಶೋಭಾ ಮುಂದೆ. ಕಳೆದ 17 ತಿಂಗಳಲ್ಲಿ ಶೋಭಾ ಓರ್ವ ಸಚಿವೆಯಾಗಿ ಅನೇಕ ಸಂದರ್ಭಗಳಲ್ಲಿ ಮಾತು, ಭಾಷಣ ಮಾಡಿದ್ದಾರೆ ನಿಜ. ಆದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ 17 ಗಂಟೆಗಳ ತರುವಾಯ ನಾವು ನೋಡಿದ, ಕೇಳಿದ ಅವರ ಸಂದರ್ಶನದಲ್ಲಿ ರಾಜ್ಯದ, ಭಾಜಪದ ರಾಜಕೀಯ ಸ್ಥಿತಿಗತಿಗಳ ಬಗೆಗೆ ಅವರ ವ್ಯಾಖ್ಯಾನಗಳ ವರಸೆ ಏಕ್ ದಂ ಸಖತ್.
ಒಟ್ಟಾರೆ ಕರ್ನಾಟಕ ಭಾಜಪ ಕೋಟೆಯ ಕಟ್ಟಾಳು. ರಾಜಕೀಯ ಕ್ಷೇತ್ರದಲ್ಲಿ ತಾವು ಯಾರಿಗೂ ಕಮ್ಮಿಯಿಲ್ಲ ಎಂದು ವಾದಿಸಿ, ಸಾಧಿಸಿ ತೋರಿಸುವ ಸ್ತ್ರೀಶಕ್ತಿ. ಓದಿ. ಸುವರ್ಣ ಚಾನಲ್ ಸಂದರ್ಶನದ ಆಯ್ದ ಭಾಗಗಳು.
(ದಟ್ಸ್ ಕನ್ನಡ ವಾರ್ತೆ)
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications