ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನನ್ನ ತಪ್ಪಾದರೂ ಏನು ಹೇಳಿ ? ನ್ಯಾ. ದಿನಕರನ್
ನ್ಯಾಯಾಲಯ ಕಲಾಪ ಬಹಿಷ್ಕರಿಸಿದ್ದ ವಕೀಲರ ಗುಂಪು ನ್ಯಾ. ಪಿಡಿ ದಿನಕರನ್ ಹಾಗೂ ನ್ಯಾ. ಮೋಹನ್ ಶಾಂತನಗೌಡರ್ ಅವರಿದ್ದ ವಿಭಾಗೀಯ ಪೀಠಕ್ಕೆ ನುಗ್ಗಿ ದಾಂಧಲೆ ನಡೆಸಿದಾಗ ಮುಖ್ಯ ನ್ಯಾ. ದಿನಕರನ್ ಈ ರೀತಿ ಪ್ರತಿಕ್ರಿಯಿಸಿದರು. ಪೀಠದಲ್ಲಿ ಕುಳಿತು ಕಲಾಪ ನಡೆಸದಂತೆ ವಕೀಲರು ದಿಕ್ಕಾರದ ಘೋಷಣೆ ಕೂಗುತ್ತಿದ್ದಾಗ ಎದ್ದು ನಿಂತು ಎರಡು ನಿಮಿಷ ಮಾತನಾಡಲು ತಮಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಆದರೂ ವಕೀಲರು ಘೋಷಣೆ ಕೂಗುತ್ತಲೇ ಇದ್ದರು. ಇದರ ನಡುವೆಯೂ ಮಾತನಾಡಿದ ಅವರು ನಾನು ನಿಮ್ಮ ಬೇಡಿಕೆ, ಭಾವನೆಗಳನ್ನು ಗೌರವಿಸುತ್ತೇನೆ. ಸಂವಿಧಾನಾತ್ಮಕ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಯಾವುದೇ ಅಡ್ಡಿ ಬಂದರು ಕರ್ತವ್ಯ ನಿಭಾಯಿಸಲೇಬೇಕು. ಅದು ನನ್ನ ಕರ್ತವ್ಯ ಎಂದು ದಿನಕರನ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, November 10, 2009, 18:08 [IST]