ಸುಶಮೀಂದ್ರರ ಕಳಾಕರ್ಷಣೆಗೆ ಭಕ್ತರ ದಂಡು ?

ತುಂಗಭದ್ರೆ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ವರ್ಚಸ್ಸು ಬುಧವಾರ ಮರಳಿ ಗಳಿಸಿಕೊಂಡಿತು. ದುಃಖ-ದುಮ್ಮಾನ ಗಳನ್ನು ರಾಯರ ಸನ್ನಿಧಾನಕ್ಕೆ ಅರ್ಪಿಸಿದ ಜನಸ್ತೋಮ ಪಾವನವಾಯಿತು. ತಾತ್ಕಾಲಿಕ ವೃಂದಾವನದಲ್ಲಿ ಇರಿಸಿದ್ದ ಸುಶಮೀಂದ್ರ ತೀರ್ಥರ ಭೌತಿಕ ಕಾಯ ಶಿರ ಭಾಗದವರೆಗೆ ತೆರೆದು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಡೆದಾಡುವ ರಾಯರ'ನ್ನು ಮತ್ತೊಮ್ಮೆ ಕಾಣುವ ಕಾತರ, ಈ ಸೌಭಾಗ್ಯ ತಮ್ಮದಾಗಿಸಿಕೊಳ್ಳುವ ಆತುರ ಸಾಲುಗಟ್ಟಿದ ಭಕ್ತರಲ್ಲಿ ಮನೆ ಮಾಡಿತ್ತು.
ತಲೆ ಕೆಳಗು: ತುಂಗಭದ್ರೆ ನೆರೆಗೆ ಸಿಕ್ಕು ಸಿಮೆಂಟ್ ಕಾಂಕ್ರೀಟ್ ಕಟ್ಟಡಗಳು ನೆಲಕಚ್ಚಿದ್ದವು. ಎರಡು ದಿನ ಶ್ರೀಮಠ ಜಲಾವೃತ, ತಾತ್ಕಾಲಿಕ ವೃಂದಾವನ ಜಲ ಸಮಾಧಿಯಾಗಿತ್ತು. ಶ್ರೀಗಳ ಭೌತಿಕ ಕಾಯ ನೋಡುವ ಭಾಗ್ಯ ಇಲ್ಲವಾದೀತು ಎಂಬ ಅನೇಕರ ದಿಗಿಲು ತಲೆ ಕೆಳಗಾಯಿತು. ಹರಿಪಾದ ಸೇರಿ ಏಳು ತಿಂಗಳಾದವು. ಮಹಾಪೂರದ ಅಟ್ಟಹಾಸದ ನಡುವೆ ಮಾಸದ ತೇಜಸ್ಸು, ಅದೇ ಸಾತ್ವಿಕ ನಗುವಿನ ಮೊಗ ಕಂಡು ವಿಸ್ಮಿತರಾದರು. ಶಿರಕ್ಕೆ ಶಿರಸಾ ಬಾಗಿ ಎಂದಿನಂತೆ ನಿಷ್ಕಳಂಕ ಮೂರ್ತಿಯ ಆಶೀರ್ವಾದ ಬೇಡಿದರು.
ತಗ್ಗಿನಲ್ಲಿದ್ದ ಹತ್ತಾರು ಬಕೆಟ್ಗಳ ನೀರು ಎತ್ತಿ ಹಾಕಲಾಗಿತ್ತು. ಆದರೆ, ಭೌತಿಕ ಕಾಯದ ರಕ್ಷಣೆಗಿಟ್ಟಿದ್ದ ಸಾಸಿವೆ ಹಾಗೂ ಉಪ್ಪು ಕರಗಿದ್ದಿಲ್ಲ ಯಥಾಸ್ಥಿತಿಯಲ್ಲಿರುವುದು ಪವಾಡ' ಎಂದು ಅಯಾಚಿತವಾಗಿ ಉದ್ಗರಿಸಿದರು. ಜನಗಣ: ಮಂತ್ರಾಲಯದ ಮುಖ್ಯ ಬೀದಿ, ನದಿ ದಂಡೆ, ಶ್ರೀಮಠದ ಆವರಣ ಹಾಗೂ ಶ್ರೀಗಳ ಭೌತಿಕ ಕಾಯವಿದ್ದ ಜಾಗದಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು.
ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿ ನಾನಾ ರಾಜ್ಯಗಳ ಭಕ್ತರು ಮಂಗಳವಾರ ರಾತ್ರಿಯಿಂದಲೇ ಬಿಡಾರ ಹೂಡಿದ್ದರು. ಬುಧವಾರ ನಸುಕು ಧಾರ್ಮಿಕ ವಿಧಿ-ವಿಧಾನಗಳು ಶುರುವಾಗುವಷ್ಟರಲ್ಲಿ ಸರತಿ ಸಾಲು ಬಹು ಉದ್ದಕ್ಕೆ ಬೆಳೆದಿತ್ತು. ಬೆಳಗ್ಗೆ ಭೌತಿಕ ಕಾಯಕ್ಕೆ ಶಾಸ್ತ್ರೋಕ್ತ ವಿಧಿಗಳು ನೆರವೇರಿದರೆ, ನಂತರದ ನಾಲ್ಕು ತಾಸು ಭಾವೋತ್ಕರ್ಷದ ಹವಿಸ್ಸು ಭಕ್ತರು ಅರ್ಪಿಸಿದರು.
ದರ್ಶಿಸಿ ಬಂದ ಭಕ್ತರು ಸಂಭ್ರಮದಲ್ಲಿ ಮೈಮರೆತು ಕುಣಿದರು, ಮಾತಿನಲ್ಲಿ ಹೇಳಲಾಗದ ಅನುಭವವೆಂದು ಆನಂದಬಾಷ್ಪ ಸುರಿಸಿದರು. ಬಂದೋಬಸ್ತ್: ಜನ ಸಾಗರವನ್ನು ಶ್ರೀಮಠ ನಿರೀಕ್ಷಿಸಿದ್ದರಿಂದ ದರ್ಶನಕ್ಕೆ ವ್ಯತ್ಯಯವಾಗದಂತೆ ವ್ಯವಸ್ಥೆ ಮಾಡಿತ್ತು. ಶ್ರೀಮಠದ ಭದ್ರತಾ ಸಿಬ್ಬಂದಿ, ಆಂಧ್ರದ 500 ಪೊಲೀಸರು ಕಾವಲಿಗೆ ನಿಂತು ನೂಕು ನುಗ್ಗಲು ತಪ್ಪಿಸಿದರು. 30,000 ಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
(ಸ್ನೇಹ ಸೇತು- ವಿಜಯ ಕರ್ನಾಟಕ)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications