ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರಲ್ಲಿ ಕನಕ ಜಯಂತಿ ಆಚರಣೆ ವಿವರ
ಕಾಗಿನೆಲೆ ಮಹಾಸಂಸ್ಥಾನದ ಕನಕಗುರು ಪೀಠದಶಿವಾನಂದಪುರಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು. ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಎಸ್.ಎ. ರಾಮದಾಸ್ ಅವರು ವಹಿಸಲಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ: ಕಾಲೇಗೌಡ ನಾಗವಾರ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸುವರು.
ಬೆಳಿಗ್ಗೆ
10
ಗಂಟೆಗೆ
ಮೈಸೂರಿನ
ಎಂ.ಎನ್.
ನವೀನ
ಮತ್ತು
ತಂಡದವರಿಂದ
ಸಾಂಸ್ಕೃತಿಕ
ಕಾರ್ಯಕ್ರಮ
"ಕನಕ
ಸಂಗೀತ
ಸುಧೆ"
ಏರ್ಪಡಿಸಲಾಗಿದೆ.
ದಿನಾಂಕ
6.11.09
ರಿಂದ
10.11.09
ರವರೆಗೆ
ಜಗನ್ಮೋಹನ
ಅರಮನೆಯಲ್ಲಿ
ಪ್ರತಿದಿನ
ಸಂಜೆ
ಸಂತ
ಶ್ರೀ
ಕನಕ
ಜಯಂತ್ಯೋತ್ಸವ
ಸಮಿತಿ
ವತಿಯಿಂದ
ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು
ಏರ್ಪಡಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
ಮೈಸೂರು ಸಿದ್ದರಾಮಯ್ಯ siddaramaiah mysore kaginele ಕಾಗಿನೆಲೆ ಕನಕ ಜಯಂತಿ kanaka jayanti ಶೋಭಾ ಕರಂದ್ಲಾಜೆ shobha karandlaje
Story first published: Wednesday, November 4, 2009, 14:08 [IST]