ಸಿಎಂ ಬದಲಾವಣೆ ಇಲ್ಲ : ಅಬ್ಬಾಸ್ ನಕ್ವಿ

ಈ ಮಧ್ಯೆ ಪ್ರಸಕ್ತ ವಿದ್ಯಮಾನದ ಬಗ್ಗೆ ಹೈಕಮಾಂಡ್ ಗೆ ವಿವರಿಸಲು ಇಂಧನ ಸಚಿವ ಕೆ ಎಸ್ ಈಶ್ವರಪ್ಪ, ವಕ್ತಾರ ಸಿಟಿ ರವಿ, ಶಾಸಕರಾದ ಆನೇಕಲ್ ನಾರಾಯಣಸ್ವಾಮಿ, ರಾಮದಾಸ್ ಮತ್ತು ಎಸ್ ರಘು ಅವರನ್ನೊಳಗೊಂಡ ನಿಯೋಗ ದೆಹಲಿಗೆ ತೆರಳಿತು. ಭಿನ್ನಮತ ಶಮನಗೊಳಿಸುವ ಕುರಿತು ಹೈಕಮಾಂಡ್ ಜೊತೆ ಚರ್ಚೆ ನಡೆಸಲಾಗುವುದು. ಸರಕಾರಕ್ಕೆ ಧಕ್ಕೆಯಾಗದ ಹಾಗೆ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರೊಂದಿಗೆ ಜನಾರ್ದನರೆಡ್ಡಿ ಇಂದು ನಡೆಸಿದ ಮಾತುಕತೆ ವಿಫಲವಾಗಿದ್ದು, ರೆಡ್ಡಿ ನಾಯಕತ್ವ ಬದಲಾಗಬೇಕು ಎಂಬ ಪಟ್ಟಿನಿಂದ ಹಿಂದೆ ಸರಿಯುತ್ತಿಲ್ಲ. ಸುಷ್ಮಾ ಸ್ವರಾಜ್ ನಮ್ಮ ತಾಯಿ ಇದ್ದ ಹಾಗೆ, ತಾಯಿ ಮಕ್ಕಳ ಬಯಕೆ ಈಡೇರಿಸುತ್ತಾರೆ ಎನ್ನುವ ನಂಬಿಕೆ ಇದೆ. ನಮ್ಮ ನಿಲುವು ಅಚಲ ಎಂದು ರೆಡ್ಡಿ ಹೇಳಿದರು.
(ಏಜನ್ಸೀಸ್)












Click it and Unblock the Notifications